<p><strong>ಮಹಾಜನ್ ಶಿಫಾರಸು: ರಾಜ್ಯದ ನಿಲುವು ಬದಲಾವಣೆ ಇಲ್ಲ</strong></p>.<p>ಬೆಂಗಳೂರು, ಮೇ 25– ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು–ಕೇರಳ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪೂರ್ಣವಾಗಿ ಅಂಗೀಕರಿಸಬೇಕೆಂಬ ಮೈಸೂರು ಸರ್ಕಾರದ ನಿಲುವು ಅಚಲ, ಅದರಲ್ಲಿ ಬದಲಾವಣೆ ಇಲ್ಲ.</p>.<p>ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರಾಗಿ ಆಯ್ಕೆಗೊಂಡಿರುವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಜೆ ಪತ್ರಿಕಾ ಸಂದರ್ಶನದಲ್ಲಿ ಇದನ್ನು ಸ್ಪಷ್ಟಪಡಿಸಿದರು.</p>.<p><strong>ದಕ್ಷಿಣ ಕನ್ನಡ ಜಿಲ್ಲೆ 31 ಮಾರ್ಗಗಳ ರಾಷ್ಟ್ರೀಕರಣ</strong></p>.<p>ಮಂಗಳೂರು, ಮೇ 25– ಜುಲೈ ಒಂದನೇ ತಾರೀಖಿನಿಂದ ದಕ್ಷಿಣ ಕನ್ನಡ ಜಿಲ್ಲೆಯ 31 ಮಾರ್ಗಗಳಲ್ಲಿ ಈಗ ಓಡುತ್ತಿರುವ 108 ಖಾಸಗಿ ಬಸ್ಸುಗಳ ಬದಲು ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳ ಓಡಾಟ ಪ್ರಾರಂಭವಾಗಲಿದೆಯೆಂದು ಪ್ರಕಟಿಸಲಾಗಿದೆ.</p>.<p><strong>ಅನಕ್ಷರತೆ ನಿವಾರಣೆಗೆ ಶ್ರೀಮತಿ ದುರ್ಗಾಬಾಯಿ ಕರೆ</strong></p>.<p>ನಂಜನಗೂಡು, ಮೇ 25– ಸ್ವಯಂ ಪ್ರೇರಿತ ಸಂಸ್ಥೆಗಳು ಮುಂದೆ ಬರದಿದ್ದಲ್ಲಿ ಯಾವ ಸರ್ಕಾರವೇ ಆಗಲಿ ಸ್ವತಃ ಶಿಕ್ಷಣದಂತಹ ಅಗಾಧ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಿಲ್ಲವೆಂದು ಶ್ರೀಮತಿ ದುರ್ಗಾಬಾಯಿ ದೇಶಮುಖ್ ಅವರು ಇಂದು ಹೇಳಿದರು.</p>.<p>ಶ್ರೀಮತಿಯವರು, ನಂಜನಗೂಡು ವಿದ್ಯಾಪೀಠದಲ್ಲಿ ಲೇಖಕರ ಸಮಾವೇಶವನ್ನು ಉದ್ಘಾಟಿಸುತ್ತಾ, ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಅಮೆರಿಕದ ನೆರವಿನಿಂದ ಅನಕ್ಷರತೆಯನ್ನು ಹೋಗಲಾಡಿಸುವ ಬಗ್ಗೆ ಭಾರಿ ಕಾರ್ಯಕ್ರಮವಿದೆಯೆಂದು ಹೇಳಿದರು.</p>.<p>ಮೈಸೂರು ಸರ್ಕಾರವು ಸಹ ಈ ದಿಸೆಯಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಈ ವಿದ್ಯಾಪೀಠವನ್ನು ಪ್ರಧಾನ ಕೇಂದ್ರವಾಗಿ ಉಪಯೋಗಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.</p>.<p><strong>ದಿಲಾರಾಮ್ ಧೀಮಾನ್</strong></p>.<p>ಬಿಲಾಸಪೂರ, ಮೇ 25– ಗ್ರಾಮಸೇವಕ ಕೆಲಸದಿಂದ ಕೇಂದ್ರ ಸರ್ಕಾರದ ಪ್ರಥಮ ದರ್ಜೆ ಆಧಿಕಾರಿ ಪದವಿಯನ್ನು ಪಡೆದಿರುವ ಪ್ರಥಮ ಹರಿಜನ್ ದಿಲಾ<br /> ರಾಮ ಧೀಮಾನ್ ಹೆಸರಿಗೆ ತಕ್ಕಂತೆ ಧೀಮಂತ. ಗ್ರಾಮಸೇವಕ ಹುದ್ದೆಯಲ್ಲಿದ್ದ ಧೀಮಾನ್ಗೆ ಪ್ರಥಮ ದರ್ಜೆಯ ಅಧಿಕಾರಿಯಾಗಲು ಹತ್ತು ವರುಷಗಳು ಹಿಡಿದವು. ಇತ್ತೀಚೆಗೆ ಸ್ಥಾಪಿತವಾದ ಭಾರತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧೀಮಾನ್ ಯಶಸ್ವೀ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.</p>.<p>ಹಿಮಾಚಲ ಪ್ರದೇಶದಲ್ಲಿನ ಬಿಲಾಸಪೂರದಿಂದ ನಾಲ್ವತ್ತು ಮೈಲಿ ದೂರದಲ್ಲಿರುವ ಮೈಹ್ರೀನ್ ಕಥ್ಲಾ ಎಂಬ ಗ್ರಾಮದಲ್ಲಿ ಬಡಿಗ–ಕಮ್ಮಾರ ಕೆಲಸದಲ್ಲಿ ತೊಡಗಿದ ಕುಟುಂಬವೊಂದರಲ್ಲಿ ದಿಲಾರಾಮ ಧೀಮಾನ್ ಜನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಹಾಜನ್ ಶಿಫಾರಸು: ರಾಜ್ಯದ ನಿಲುವು ಬದಲಾವಣೆ ಇಲ್ಲ</strong></p>.<p>ಬೆಂಗಳೂರು, ಮೇ 25– ಮೈಸೂರು– ಮಹಾರಾಷ್ಟ್ರ ಮತ್ತು ಮೈಸೂರು–ಕೇರಳ ಗಡಿ ವಿವಾದ ಕುರಿತ ಮಹಾಜನ್ ಆಯೋಗದ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಪೂರ್ಣವಾಗಿ ಅಂಗೀಕರಿಸಬೇಕೆಂಬ ಮೈಸೂರು ಸರ್ಕಾರದ ನಿಲುವು ಅಚಲ, ಅದರಲ್ಲಿ ಬದಲಾವಣೆ ಇಲ್ಲ.</p>.<p>ಕಾಂಗ್ರೆಸ್ ಶಾಸಕ ಪಕ್ಷದ ನೂತನ ನಾಯಕರಾಗಿ ಆಯ್ಕೆಗೊಂಡಿರುವ ಶ್ರೀ ವೀರೇಂದ್ರ ಪಾಟೀಲ್ ಅವರು ಇಂದು ಸಂಜೆ ಪತ್ರಿಕಾ ಸಂದರ್ಶನದಲ್ಲಿ ಇದನ್ನು ಸ್ಪಷ್ಟಪಡಿಸಿದರು.</p>.<p><strong>ದಕ್ಷಿಣ ಕನ್ನಡ ಜಿಲ್ಲೆ 31 ಮಾರ್ಗಗಳ ರಾಷ್ಟ್ರೀಕರಣ</strong></p>.<p>ಮಂಗಳೂರು, ಮೇ 25– ಜುಲೈ ಒಂದನೇ ತಾರೀಖಿನಿಂದ ದಕ್ಷಿಣ ಕನ್ನಡ ಜಿಲ್ಲೆಯ 31 ಮಾರ್ಗಗಳಲ್ಲಿ ಈಗ ಓಡುತ್ತಿರುವ 108 ಖಾಸಗಿ ಬಸ್ಸುಗಳ ಬದಲು ರಾಜ್ಯ ಸಾರಿಗೆ ಇಲಾಖೆಯ ಬಸ್ಸುಗಳ ಓಡಾಟ ಪ್ರಾರಂಭವಾಗಲಿದೆಯೆಂದು ಪ್ರಕಟಿಸಲಾಗಿದೆ.</p>.<p><strong>ಅನಕ್ಷರತೆ ನಿವಾರಣೆಗೆ ಶ್ರೀಮತಿ ದುರ್ಗಾಬಾಯಿ ಕರೆ</strong></p>.<p>ನಂಜನಗೂಡು, ಮೇ 25– ಸ್ವಯಂ ಪ್ರೇರಿತ ಸಂಸ್ಥೆಗಳು ಮುಂದೆ ಬರದಿದ್ದಲ್ಲಿ ಯಾವ ಸರ್ಕಾರವೇ ಆಗಲಿ ಸ್ವತಃ ಶಿಕ್ಷಣದಂತಹ ಅಗಾಧ ಸಮಸ್ಯೆಯನ್ನು ಯಶಸ್ವಿಯಾಗಿ ಪರಿಹರಿಸಲು ಸಾಧ್ಯವಿಲ್ಲವೆಂದು ಶ್ರೀಮತಿ ದುರ್ಗಾಬಾಯಿ ದೇಶಮುಖ್ ಅವರು ಇಂದು ಹೇಳಿದರು.</p>.<p>ಶ್ರೀಮತಿಯವರು, ನಂಜನಗೂಡು ವಿದ್ಯಾಪೀಠದಲ್ಲಿ ಲೇಖಕರ ಸಮಾವೇಶವನ್ನು ಉದ್ಘಾಟಿಸುತ್ತಾ, ಅಭಿವೃದ್ಧಿ ಪಥದಲ್ಲಿರುವ ರಾಷ್ಟ್ರಗಳಲ್ಲಿ ಅಮೆರಿಕದ ನೆರವಿನಿಂದ ಅನಕ್ಷರತೆಯನ್ನು ಹೋಗಲಾಡಿಸುವ ಬಗ್ಗೆ ಭಾರಿ ಕಾರ್ಯಕ್ರಮವಿದೆಯೆಂದು ಹೇಳಿದರು.</p>.<p>ಮೈಸೂರು ಸರ್ಕಾರವು ಸಹ ಈ ದಿಸೆಯಲ್ಲಿ ಅನಕ್ಷರತೆಯನ್ನು ಹೋಗಲಾಡಿಸಲು ಈ ವಿದ್ಯಾಪೀಠವನ್ನು ಪ್ರಧಾನ ಕೇಂದ್ರವಾಗಿ ಉಪಯೋಗಿಸಿಕೊಳ್ಳಬೇಕೆಂದು ಸಲಹೆ ಮಾಡಿದರು.</p>.<p><strong>ದಿಲಾರಾಮ್ ಧೀಮಾನ್</strong></p>.<p>ಬಿಲಾಸಪೂರ, ಮೇ 25– ಗ್ರಾಮಸೇವಕ ಕೆಲಸದಿಂದ ಕೇಂದ್ರ ಸರ್ಕಾರದ ಪ್ರಥಮ ದರ್ಜೆ ಆಧಿಕಾರಿ ಪದವಿಯನ್ನು ಪಡೆದಿರುವ ಪ್ರಥಮ ಹರಿಜನ್ ದಿಲಾ<br /> ರಾಮ ಧೀಮಾನ್ ಹೆಸರಿಗೆ ತಕ್ಕಂತೆ ಧೀಮಂತ. ಗ್ರಾಮಸೇವಕ ಹುದ್ದೆಯಲ್ಲಿದ್ದ ಧೀಮಾನ್ಗೆ ಪ್ರಥಮ ದರ್ಜೆಯ ಅಧಿಕಾರಿಯಾಗಲು ಹತ್ತು ವರುಷಗಳು ಹಿಡಿದವು. ಇತ್ತೀಚೆಗೆ ಸ್ಥಾಪಿತವಾದ ಭಾರತೀಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಧೀಮಾನ್ ಯಶಸ್ವೀ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ.</p>.<p>ಹಿಮಾಚಲ ಪ್ರದೇಶದಲ್ಲಿನ ಬಿಲಾಸಪೂರದಿಂದ ನಾಲ್ವತ್ತು ಮೈಲಿ ದೂರದಲ್ಲಿರುವ ಮೈಹ್ರೀನ್ ಕಥ್ಲಾ ಎಂಬ ಗ್ರಾಮದಲ್ಲಿ ಬಡಿಗ–ಕಮ್ಮಾರ ಕೆಲಸದಲ್ಲಿ ತೊಡಗಿದ ಕುಟುಂಬವೊಂದರಲ್ಲಿ ದಿಲಾರಾಮ ಧೀಮಾನ್ ಜನಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>