ಇಂಧನ ಸಚಿವೆ ಶೋಭಾ ಕರಂದ್ಲಾಜೆಯವರು ವಿದ್ಯುತ್ ಉಳಿತಾಯದ ಸಲುವಾಗಿ ರಾಜ್ಯದಾದ್ಯಂತ ಕಡ್ಡಾಯವಾಗಿ ಸಿಎಫ್ಎಲ್ ಬಲ್ಬ್ಗಳನ್ನೇ ಉಪಯೋಗಿಸಬೇಕೆಂದು ಆದೇಶ ಹೊರಡಿಸಿದ್ದರು.
ಒಂದೆರಡು ದಿನ ಹಳ್ಳಿಗಳಿಗೆ ವಿತರಕರು ಬಂದು ಕೆಲವೇ ಕೆಲವು ಬಲ್ಬ್ಗಳನ್ನು ನೀಡಿ ಹೋದವರು ಮತ್ತೆ ತಿರುಗಿ ನೋಡಲೇ ಇಲ್ಲ. ಈಗಲಾದರೂ ಸಚಿವರು ಮಾಜಿ ಮುಖ್ಯಮಂತ್ರಿಯವರಿಗೆ ಸ್ಥಾನ, ರೇಷನ್ಕಾರ್ಡ್, ಅಡುಗೆ ಅನಿಲ ಇತ್ಯಾದಿಗಳಲ್ಲಿ ಮುಳುಗದೆ ಇರುವ ವಿದ್ಯುತ್ತನ್ನು ಉಳಿತಾಯ ಮಾಡುವ ಕೆಲಸದತ್ತ ಗಮನ ಹರಿಸಲಿ.