ಎಸಿಬಿ ಅಧಿಕಾರಿಗಳು ಇಬ್ಬರು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿ, ಕೋಟಿ ಕೋಟಿ ಸಂಪತ್ತನ್ನುಪತ್ತೆ ಹಚ್ಚಿದ್ದಾರೆ. ಈ ಸಂಪತ್ತು ಸಾರ್ವಜನಿಕರದ್ದಾಗಿದೆ. ಸರ್ಕಾರ ಅದನ್ನು ಸಾರ್ವಜನಿಕ ಕಾರ್ಯಗಳಾದ ರಸ್ತೆ ನಿರ್ಮಾಣ, ನೀರು ಪೂರೈಕೆ ಯೋಜನೆಗಳಿಗೆ ಬಳಸಲಿ.
ನಮ್ಮ ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆ, ಕುಡಿಯುವ ನೀರಿನ ಸೌಲಭ್ಯಗಳಿಲ್ಲದೆ ಜನರು ಪರಿತಪಿಸುತ್ತಿರುವ ವಿಚಾರ ಸರ್ಕಾರಕ್ಕೆ ತಿಳಿದದ್ದೇ. ಇನ್ನಷ್ಟು ಭ್ರಷ್ಟರ ಬೆನ್ನುಹತ್ತಿ ಅವರ ಸಂಪತ್ತನ್ನು ಅಗೆಯುತ್ತಾ ಹೋದರೆ ಸಾರ್ವಜನಿಕ ಕಾರ್ಯಗಳಿಗೆ ಹಣದ ಕೊರತೆ ಆಗಲಿಕ್ಕಿಲ್ಲ.