‘ಭಯೋತ್ಪಾದಕರನ್ನು ಮುಸ್ಲಿಂ ಸಮುದಾಯದಿಂದ ಬಹಿಷ್ಕರಿಸಿ’ ಎಂದು ರಾಜ್ಯ ವಕ್ಫ್ ಕಮಿಟಿಗೆ ಉಮ್ಮತ್ ಚಿಂತಕರ ವೇದಿಕೆ ಮನವಿ ಸಲ್ಲಿಸಿರುವುದು (ಪ್ರ.ವಾ., ನ. 23) ಪ್ರಶಂಸನೀಯ. ಎಲ್ಲ ಸಮುದಾಯಗಳಲ್ಲೂ ಒಳ್ಳೆಯವರು ಹಾಗೂ ಕೆಟ್ಟವರು ಹೀಗೆ ಎರಡು ರೀತಿಯ ಜನರೂ ಇರುತ್ತಾರೆ. ಎಲ್ಲ ಧರ್ಮ, ಜಾತಿಗಳಲ್ಲೂ ಬಹುತೇಕರು ಯಾವುದರ ಗೊಡವೆಗೂ ಹೋಗದೆ ವೈಯಕ್ತಿಕ ಬದುಕಿನಲ್ಲೇ ನೆಮ್ಮದಿಯನ್ನು ಕಂಡುಕೊಳ್ಳುವ ಮನಃಸ್ಥಿತಿಯನ್ನು ಉಳ್ಳವರಾಗಿರುತ್ತಾರೆ.