ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಿ ಮದ್ದು: ನಿರ್ಲಕ್ಷ್ಯ ಸಲ್ಲ

Last Updated 8 ಜುಲೈ 2021, 19:30 IST
ಅಕ್ಷರ ಗಾತ್ರ

ಕೊರೊನಾದ ಈ ಕಾಲಘಟ್ಟದಲ್ಲಿ ವೈದ್ಯ ಪದ್ಧತಿಗಳಾದ ಆಯುರ್ವೇದ, ಅಲೋಪಥಿ, ಹೋಮಿಯೊಪಥಿ ಬಗ್ಗೆ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಿಂದ ಪದವಿ ಪಡೆದವರು ಮಾತ್ರವೇ ಯೋಗ್ಯ ವೈದ್ಯರು ಎಂಬುದು ಕೆಲವರ ಭಾವನೆಯಾಗಿದೆ. ಆದರೆ ಅನೇಕ ಪರಂಪರಾಗತ ವೈದ್ಯರು, ನಾಟಿ ವೈದ್ಯರು, ಮನೆತನದ ಮೂಲಕ ತರಬೇತಿ ಪಡೆದ ವೈದ್ಯರು ಒಳ್ಳೆಯ ನಾಟಿ ಮದ್ದನ್ನು ಕೊಟ್ಟು ರೋಗವನ್ನು ಗುಣಪಡಿಸಿರುವುದನ್ನು ನೋಡಬಹುದು. ಬಹುತೇಕ ಇವರು ಪ್ರಸಿದ್ಧಿಗಾಗಲೀ, ಹಣಕ್ಕಾಗಲೀ ಈ ಕೆಲಸವನ್ನು ಮಾಡುತ್ತಿಲ್ಲ.

ಅಲೋಪಥಿ ವೈದ್ಯರಿಂದ ಗುಣಪಡಿಸಲು ಸಾಧ್ಯವಾಗದಿದ್ದ ಎರಡು ಕಾಯಿಲೆಗಳನ್ನು ಇಂತಹ ಪರಂಪರಾಗತ ವೈದ್ಯರಿಂದ ನಾನು ಗುಣಪಡಿಸಿಕೊಂಡಿದ್ದೇನೆ. ಇಂತಹ ಚಿಕಿತ್ಸಕರನ್ನು ಗುರುತಿಸಿ ಅವರ ವೃತ್ತಿಯನ್ನು ಗೌರವಿಸಿ, ಸಮಾಜದ ಒಳಿತಿಗೆ ಉಪಯೋಗಿಸಿಕೊಳ್ಳುವುದು ಉತ್ತಮ ಕಾರ್ಯವಾಗುತ್ತದೆ.

–ಮಲ್ಲಿಕಾರ್ಜುನ ಸ್ವಾಮಿ, ಮಧುಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT