ಈಗಿನ ಸಂಪುಟಕ್ಕೆ ಕೆಲವರ ಸೇರ್ಪಡೆಯನ್ನು ಗಮನಿಸಿದರೆ, ಉಳ್ಳವರ ಹುನ್ನಾರ ಸ್ಪಷ್ಟವಾಗುತ್ತದೆ. ಶಾಸಕರ ಕುರಿತು ಕಾಳಜಿ ಉಳ್ಳವರು, ಸಮಬಾಳು– ಸಮಪಾಲು ತತ್ವದಲ್ಲಿ ನಂಬಿಕೆಯುಳ್ಳವರು ಸಾಮಾಜಿಕ ನ್ಯಾಯ ಒದಗಿಸಲು ಪ್ರಯತ್ನಿಸಬೇಕು. ಅದಾಗಲೇ ಅಧಿಕಾರ ಅನುಭವಿಸಿದವರನ್ನು ಕೈಬಿಟ್ಟು, ನಿಷ್ಪಕ್ಷಪಾತವಾಗಿ ಹೊಸಬರಿಗೆ ಅವಕಾಶ ಮಾಡಿಕೊಡಬೇಕು. ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಈ ಕುರಿತು ಚರ್ಚೆ ನಡೆಯಬೇಕಿದೆ.