ಸರ್ಕಾರದಲ್ಲಿ ಮಂದಿರ, ಮಸೀದಿ, ಚರ್ಚುಗಳ ಪ್ರಭಾವ ಇರಬಾರದು ಎಂದು ಸಂವಿಧಾನ ಪ್ರತಿಪಾದಿಸುತ್ತದೆ. ಅಂತಹ ಸಂವಿಧಾನವನ್ನು ಜಾರಿಗೆ ತಂದು ಏಳು ದಶಕಗಳೇ ಕಳೆದಿದ್ದರೂ ನಾವು ಸಂವಿಧಾನ ಪಾಲನೆಯಲ್ಲಿ ಹಿಂದೆ ಬಿದ್ದಿದ್ದೇವೆ. ಸಂತೃಪ್ತ, ಅತೃಪ್ತ, ಮಾಜಿ, ಹಾಲಿ, ಭಾವಿ ರಾಜಕಾರಣಿಗಳೆಲ್ಲರೂ ಮಠಾಧೀಶರನ್ನು ಗೋಪ್ಯವಾಗಿ ಭೇಟಿ ಮಾಡುವುದು ಪ್ರಜಾಪ್ರಭುತ್ವದ ಹಿಮ್ಮುಖ ಚಲನೆಯಂತೆ ಭಾಸವಾಗುತ್ತದೆ. ಜೊತೆಗೆ ಇದರಿಂದ ‘ಕ್ಯಾಸ್ಟ್ ಈಸ್ ದಿ ಕಿಂಗ್ ಮೇಕರ್ ಆಫ್ ದಿಸ್ ಕಂಟ್ರಿ’ ಎಂಬ ಕುಹಕ ನುಡಿಗೆ ಇಂಬು ಕೊಟ್ಟಂತಾಗುತ್ತದೆ.