<p>ಯುವಜನರ ಬದುಕಿಗೆ ನೇರವಾದ ಸಂಬಂಧವಿರುವ ಕೇಂದ್ರೀಯ ನೇಮಕಾತಿ ಪರೀಕ್ಷೆಗಳ ಬಗ್ಗೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವುದು ಆಶಾದಾಯಕ ಬೆಳವಣಿಗೆ. ಭಾರತದ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ಹಿಂದಿ ಹೇರಿಕೆಯನ್ನು ಅವರು ಪ್ರಶ್ನಿಸುತ್ತಿದ್ದಾರೆ. ನಾಡು- ನುಡಿಗೆ ತಮ್ಮ ರಾಜಕೀಯವನ್ನು ಇನ್ನಷ್ಟು ಕೇಂದ್ರೀಕರಿಸುವ ಮೂಲಕ ತಮ್ಮದು ಅಸಲಿ ಪ್ರಾದೇಶಿಕ ಪಕ್ಷ ಎಂಬುದನ್ನು ಅವರು ಸಾಬೀತು ಪಡಿಸಬೇಕಾಗಿದೆ.</p>.<p>ಇದೇ 27ರಂದು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಅದು ಅಕ್ಟೋಬರ್ಗೆ ಮುಂದೂಡಲ್ಪಟ್ಟಿದೆ. ಇದು ಕೇಂದ್ರೀಯ ನೇಮಕಾತಿ ಪರೀಕ್ಷೆಗಳಲ್ಲಿಯೇ ಕಿರೀಟಪ್ರಾಯವಾಗಿರುವ ಪರೀಕ್ಷೆ. ಆದರೆ, ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದಾದ್ದರಿಂದ ಈ ಸಂಧಿಕಾಲದಲ್ಲಿ ನಾವು ಜಾಗೃತರಾಗಬೇಕಿದೆ. ಸಾರ್ವಜನಿಕರೂ ಎಚ್ಚೆತ್ತುಕೊಳ್ಳಬೇಕಾಗಿದೆ.</p>.<p>ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸುವಂತೆ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದು ತಮಿಳರು, ತೆಲುಗರು ಸೇರಿದಂತೆ ಹಿಂದಿಯೇತರ ಎಲ್ಲಾ ಭಾಷಿಕರ ಸಮಸ್ಯೆಯೂ ಆಗಿರುವುದರಿಂದ, ಇಂಗ್ಲಿಷ್ ಗೊತ್ತಿದ್ದವರು ಇಂತಹ ಮಹತ್ವದ ವಿಷಯವನ್ನು ಇಂಗ್ಲಿಷ್ನಲ್ಲಿಯೂ ಬರೆಯಬೇಕು. ಈ ಮೂಲಕ ಕರ್ನಾಟಕದ ಹೊರಗೂ ಈ ಬೇಡಿಕೆಯನ್ನು ವಿಸ್ತರಿಸಬೇಕಿದೆ. ಹಿಂದಿಯೇತರ ಎಲ್ಲ ಭಾಷಿಕರನ್ನೂ ಒಳಗೊಳ್ಳಬೇಕಿದೆ.</p>.<p><em><strong>-ಗಿರೀಶ್ ಮತ್ತೇರ, ಯರಗಟ್ಟಿ ಹಳ್ಳಿ, ಚನ್ನಗಿರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಯುವಜನರ ಬದುಕಿಗೆ ನೇರವಾದ ಸಂಬಂಧವಿರುವ ಕೇಂದ್ರೀಯ ನೇಮಕಾತಿ ಪರೀಕ್ಷೆಗಳ ಬಗ್ಗೆ ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತುತ್ತಿರುವುದು ಆಶಾದಾಯಕ ಬೆಳವಣಿಗೆ. ಭಾರತದ ಒಕ್ಕೂಟ ಸರ್ಕಾರದಿಂದ ಆಗುತ್ತಿರುವ ಹಿಂದಿ ಹೇರಿಕೆಯನ್ನು ಅವರು ಪ್ರಶ್ನಿಸುತ್ತಿದ್ದಾರೆ. ನಾಡು- ನುಡಿಗೆ ತಮ್ಮ ರಾಜಕೀಯವನ್ನು ಇನ್ನಷ್ಟು ಕೇಂದ್ರೀಕರಿಸುವ ಮೂಲಕ ತಮ್ಮದು ಅಸಲಿ ಪ್ರಾದೇಶಿಕ ಪಕ್ಷ ಎಂಬುದನ್ನು ಅವರು ಸಾಬೀತು ಪಡಿಸಬೇಕಾಗಿದೆ.</p>.<p>ಇದೇ 27ರಂದು ಯುಪಿಎಸ್ಸಿ ಪೂರ್ವಭಾವಿ ಪರೀಕ್ಷೆ ಇತ್ತು. ಕೋವಿಡ್ ಎರಡನೇ ಅಲೆಯ ಪರಿಣಾಮವಾಗಿ ಅದು ಅಕ್ಟೋಬರ್ಗೆ ಮುಂದೂಡಲ್ಪಟ್ಟಿದೆ. ಇದು ಕೇಂದ್ರೀಯ ನೇಮಕಾತಿ ಪರೀಕ್ಷೆಗಳಲ್ಲಿಯೇ ಕಿರೀಟಪ್ರಾಯವಾಗಿರುವ ಪರೀಕ್ಷೆ. ಆದರೆ, ಇಂಗ್ಲಿಷ್ ಜೊತೆಗೆ ಹಿಂದಿ ಮಾಧ್ಯಮದಲ್ಲಿ ಮಾತ್ರ ಇದು ಇರುತ್ತದಾದ್ದರಿಂದ ಈ ಸಂಧಿಕಾಲದಲ್ಲಿ ನಾವು ಜಾಗೃತರಾಗಬೇಕಿದೆ. ಸಾರ್ವಜನಿಕರೂ ಎಚ್ಚೆತ್ತುಕೊಳ್ಳಬೇಕಾಗಿದೆ.</p>.<p>ಎಲ್ಲ ಪ್ರಾದೇಶಿಕ ಭಾಷೆಗಳಲ್ಲೂ ಬರೆಯಲು ಅವಕಾಶ ಕಲ್ಪಿಸುವಂತೆ ಹಕ್ಕೊತ್ತಾಯ ಮಂಡಿಸಬೇಕಾಗಿದೆ. ಇದು ತಮಿಳರು, ತೆಲುಗರು ಸೇರಿದಂತೆ ಹಿಂದಿಯೇತರ ಎಲ್ಲಾ ಭಾಷಿಕರ ಸಮಸ್ಯೆಯೂ ಆಗಿರುವುದರಿಂದ, ಇಂಗ್ಲಿಷ್ ಗೊತ್ತಿದ್ದವರು ಇಂತಹ ಮಹತ್ವದ ವಿಷಯವನ್ನು ಇಂಗ್ಲಿಷ್ನಲ್ಲಿಯೂ ಬರೆಯಬೇಕು. ಈ ಮೂಲಕ ಕರ್ನಾಟಕದ ಹೊರಗೂ ಈ ಬೇಡಿಕೆಯನ್ನು ವಿಸ್ತರಿಸಬೇಕಿದೆ. ಹಿಂದಿಯೇತರ ಎಲ್ಲ ಭಾಷಿಕರನ್ನೂ ಒಳಗೊಳ್ಳಬೇಕಿದೆ.</p>.<p><em><strong>-ಗಿರೀಶ್ ಮತ್ತೇರ, ಯರಗಟ್ಟಿ ಹಳ್ಳಿ, ಚನ್ನಗಿರಿ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>