<p class="Briefhead">'ಇಂದಿರಾ ಕ್ಯಾಂಟೀನ್’ ಹೆಸರನ್ನು ಬಿಜೆಪಿ ನೇತೃತ್ವದ ಸರ್ಕಾರ ಬದಲಿಸಲು ಮುಂದಾಗಿರುವುದು ವರದಿಯಾಗಿದೆ. ಮಾಡಲು ಬೇರೆ ಏನೂ ಕೆಲಸ ಇಲ್ಲದವರು ಇನ್ನೇನೋ ಮಾಡಿದರಂತೆ ಎಂಬ ಗಾದೆ ಮಾತಿನಂತಿದೆ ಸರ್ಕಾರದ ಈ ನಡೆ. ಯಾರು ಒಪ್ಪಲಿ, ಬಿಡಲಿ. ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದವರು. ಅವರ ಹೆಸರನ್ನು ಆ ಕ್ಯಾಂಟೀನ್ಗೆ ಇಟ್ಟಿದ್ದಾರೆ. ಅದರಿಂದ ಯಾರಿಗೂ ನಷ್ಟ ಇಲ್ಲ.</p>.<p>ಈಗ ಚರ್ಚೆ ಆಗಬೇಕಾಗಿರುವುದು ಹೆಸರಿನ ಬಗ್ಗೆ ಅಲ್ಲ. ಬದಲಿಗೆ ಕ್ಯಾಂಟೀನ್ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಮತ್ತು ಆಹಾರದ ಪ್ರಮಾಣದ ಬಗ್ಗೆ. ಈ ಸರ್ಕಾರಕ್ಕೆ ಜನಪರ ಕಾಳಜಿ ಇದ್ದರೆ ಅದೇ ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಹಾಗೂ ಇನ್ನೂ ಹೆಚ್ಚು ಪ್ರಮಾಣದ ಆಹಾರವನ್ನು ನೀಡುವ ಬಗ್ಗೆ ಚಿಂತಿಸಲಿ. ಅದನ್ನು ಬಿಟ್ಟು, ಹೆಸರನ್ನು ಬದಲಿಸುವ ಕ್ಷುಲ್ಲಕ ರಾಜಕೀಯ ಬೇಡ.</p>.<p>ಅತಿವೃಷ್ಟಿಯಿಂದ ರಾಜ್ಯದ ಜನರು ತೊಂದರೆ ಅನುಭವಿಸಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದೆ. ಯುವಪೀಳಿಗೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ ಎಂಬ ಮಾತಿದೆ. ಇವನ್ನೆಲ್ಲ ನಿಭಾಯಿಸುವ ಕಡೆ ಗಮನ ಕೊಡುವುದು ಬಿಟ್ಟು, ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಗಳು ಬೇಡ.</p>.<p><strong>ಆರ್.ಎಸ್. ಅಯ್ಯರ್, <span class="Designate">ತುಮಕೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead">'ಇಂದಿರಾ ಕ್ಯಾಂಟೀನ್’ ಹೆಸರನ್ನು ಬಿಜೆಪಿ ನೇತೃತ್ವದ ಸರ್ಕಾರ ಬದಲಿಸಲು ಮುಂದಾಗಿರುವುದು ವರದಿಯಾಗಿದೆ. ಮಾಡಲು ಬೇರೆ ಏನೂ ಕೆಲಸ ಇಲ್ಲದವರು ಇನ್ನೇನೋ ಮಾಡಿದರಂತೆ ಎಂಬ ಗಾದೆ ಮಾತಿನಂತಿದೆ ಸರ್ಕಾರದ ಈ ನಡೆ. ಯಾರು ಒಪ್ಪಲಿ, ಬಿಡಲಿ. ಇಂದಿರಾ ಗಾಂಧಿ ಈ ದೇಶದ ಪ್ರಧಾನಿಯಾಗಿದ್ದವರು. ಅವರ ಹೆಸರನ್ನು ಆ ಕ್ಯಾಂಟೀನ್ಗೆ ಇಟ್ಟಿದ್ದಾರೆ. ಅದರಿಂದ ಯಾರಿಗೂ ನಷ್ಟ ಇಲ್ಲ.</p>.<p>ಈಗ ಚರ್ಚೆ ಆಗಬೇಕಾಗಿರುವುದು ಹೆಸರಿನ ಬಗ್ಗೆ ಅಲ್ಲ. ಬದಲಿಗೆ ಕ್ಯಾಂಟೀನ್ನಲ್ಲಿ ನೀಡುತ್ತಿರುವ ಆಹಾರದ ಗುಣಮಟ್ಟ ಮತ್ತು ಆಹಾರದ ಪ್ರಮಾಣದ ಬಗ್ಗೆ. ಈ ಸರ್ಕಾರಕ್ಕೆ ಜನಪರ ಕಾಳಜಿ ಇದ್ದರೆ ಅದೇ ಕಡಿಮೆ ಬೆಲೆಯಲ್ಲಿ ಒಳ್ಳೆಯ ಗುಣಮಟ್ಟದ ಹಾಗೂ ಇನ್ನೂ ಹೆಚ್ಚು ಪ್ರಮಾಣದ ಆಹಾರವನ್ನು ನೀಡುವ ಬಗ್ಗೆ ಚಿಂತಿಸಲಿ. ಅದನ್ನು ಬಿಟ್ಟು, ಹೆಸರನ್ನು ಬದಲಿಸುವ ಕ್ಷುಲ್ಲಕ ರಾಜಕೀಯ ಬೇಡ.</p>.<p>ಅತಿವೃಷ್ಟಿಯಿಂದ ರಾಜ್ಯದ ಜನರು ತೊಂದರೆ ಅನುಭವಿಸಿದ್ದಾರೆ. ಈರುಳ್ಳಿ ಬೆಲೆ ಗಗನಕ್ಕೆ ಮುಟ್ಟಿದೆ. ಯುವಪೀಳಿಗೆಗೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತಿಲ್ಲ ಎಂಬ ಮಾತಿದೆ. ಇವನ್ನೆಲ್ಲ ನಿಭಾಯಿಸುವ ಕಡೆ ಗಮನ ಕೊಡುವುದು ಬಿಟ್ಟು, ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನಗಳು ಬೇಡ.</p>.<p><strong>ಆರ್.ಎಸ್. ಅಯ್ಯರ್, <span class="Designate">ತುಮಕೂರು</span></strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>