ಶ್ರವಣಬೆಳಗೊಳದಲ್ಲಿ ಇದೇ ತಿಂಗಳ 24ರಿಂದ 26ರವರೆಗೆ ನಡೆಯಲಿರುವ ಹಳಗನ್ನಡ ಸಾಹಿತ್ಯ ಸಮ್ಮೇಳನದಲ್ಲಿಗಮಕಕ್ಕೂ ಅವಕಾಶ ಮಾಡಿಕೊಡಬೇಕೆಂಬ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರ ಮನವಿಗೆ ಸಾಹಿತ್ಯ ಪರಿಷತ್ತು ಕವಡೆಕಾಸಿನ ಬೆಲೆಯನ್ನೂ ನೀಡಿಲ್ಲ. ಬದಲಿಗೆ ‘ಹಳಗನ್ನಡದ ಓದು’ ಎಂಬ ಒಂದು ಗೋಷ್ಠಿಯನ್ನೇ ಇಟ್ಟಿರುವುದು ಹಾಸ್ಯಾಸ್ಪದ. ಗಮಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ, ಹಳಗನ್ನಡ- ಗಮಕದ ಸಂಬಂಧದ ಬಗ್ಗೆ ತಮ್ಮ ಧೋರಣೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹೊತ್ತು ಕಬ್ಬಿಣದ ಕಡಲೆ ಎನ್ನುತ್ತಾ ಪಠ್ಯಪುಸ್ತಕಗಳಿಂದ ಮಾಯವಾಗುವಂತೆ ಮಾಡಿರುವ ಹಳಗನ್ನಡದ ಕಾವ್ಯಗಳನ್ನು ಒಂದಿಷ್ಟೂ ಕಷ್ಟಪಡದೆ ಓದುವ, ಕಾವ್ಯದ ಸೊಗಸನ್ನು ಕೇಳುಗರಿಗೆ ನೇರವಾಗಿ ತಲುಪಿಸುತ್ತಿರುವ ಗಮಕವನ್ನು ಕೈಬಿಟ್ಟದ್ದು ಕನ್ನಡಕ್ಕಾದ ಅವಮಾನ.