ಹೃದಯಸಂಬಂಧಿ ತೊಂದರೆಯಿಂದ ಬಳಲುತ್ತಿದ್ದ 40 ದಿನದ ಮಗುವನ್ನು ಇತ್ತೀಚೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನಿಂದ ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಆಂಬುಲೆನ್ಸ್ ಮೂಲಕ ಬೆಂಗಳೂರಿಗೆ ಕರೆದೊಯ್ದ ಹನೀಫ್ ಎಂಬ ಚಾಲಕರ ಕರ್ತವ್ಯಪ್ರಜ್ಞೆ ಒಂದೆಡೆಯಾದರೆ, ದೂರದ ಬೆಂಗಳೂರಿನವರೆಗೂ ಆಂಬುಲೆನ್ಸ್ನ ಸುಗಮ ಸಂಚಾರಕ್ಕೆ ದಾರಿ ಮಾಡಿಕೊಟ್ಟ ಪೊಲೀಸರ ವೃತ್ತಿಪರತೆ ಮತ್ತೊಂದೆಡೆ. ಇವರೆಲ್ಲರೂ ಅಭಿನಂದನಾರ್ಹರು.