ಇಲ್ಲಿ ಒಂದು ಪ್ರಶ್ನೆ- ಈ 30 ವರ್ಷಗಳ ಅವಧಿಯಲ್ಲಿ ಸಿಧು ಅವರಿಂದ ಮತ್ತಾವ ಘಾತಕ ನಡವಳಿಕೆಯೂ ಕಂಡುಬಂದಿಲ್ಲ. ಅದೂ ಅಲ್ಲದೆ ಅವರು ತಮ್ಮ ಉತ್ತಮ ಆಟದಿಂದ ಭಾರತ ಕ್ರಿಕೆಟ್ ಕ್ಷೇತ್ರದಲ್ಲಿ ಧ್ರುವತಾರೆಯಾಗಿ ಮೆರೆದು ದೇಶದ ಪ್ರತಿಷ್ಠೆಗೆ ಕಾರಣರಾಗಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಪಂಜಾಬ್ ರಾಜ್ಯ ಘಟಕದ ಅಧ್ಯಕ್ಷರಾಗಿದ್ದರು. ಇವೆಲ್ಲ ಅವರ ಉತ್ತಮ ನಡ ವಳಿಕೆಗೆ ಮತ್ತು ಅವರ ಸಾರ್ವಜನಿಕ ಸೇವಾಸಕ್ತಿಗೆ ನಿದರ್ಶನಗಳು. ಹೀಗಾಗಿ, ಈ ಮೂರು ದಶಕಗಳಲ್ಲಿನ ಬದುಕು ಸಿಧು ಅವರ ಉತ್ತಮ ನಡವಳಿಕೆಗೆ ಸಾಕ್ಷಿಯಾಗಿದೆ. ನ್ಯಾಯಾಲಯವು ಸ್ವ ಇಚ್ಛೆಯಿಂದ ಅವರಿಗೆ ಶಿಕ್ಷೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿ ಬಿಡುಗಡೆ ಮಾಡಿದರೆ, ಜನಸೇವೆ ಮಾಡಲು ಅನುವು ಮಾಡಿಕೊಟ್ಟಂತೆ ಆಗುತ್ತದೆ.