ಕೊರೊನಾ ವೈರಸ್ ಜಗತ್ತಿನಾದ್ಯಂತ ಭೀತಿ ಹುಟ್ಟಿಸಿದೆ. ಇಂತಹ ಸಂದರ್ಭದಲ್ಲಿ, ‘ಅನ್ಯ ದೇಶಗಳು ನಮ್ಮ ಸಂಸ್ಕೃತಿಯನ್ನು ಪಾಲಿಸುತ್ತಿವೆ’, ‘ಭಾರತದಲ್ಲಿ ಈ ವೈರಸ್ ಬೇಗ ಹರಡುವುದಿಲ್ಲ’ ಎಂಬಂತಹ ಪ್ರತಿಷ್ಠೆಯ ಮಾತುಗಳು ನಮ್ಮಲ್ಲಿ ಕೇಳಿಬರುತ್ತಿವೆ. ಈಗ ನಾವು ಇಂತಹ ಪ್ರತಿಷ್ಠೆಗಿಂತ, ಜನರಲ್ಲಿ ವೈರಸ್ ಬಗ್ಗೆ ಸೂಕ್ತ ಅರಿವು ಮೂಡಿಸಬೇಕಾಗಿದೆ. ಸರ್ಕಾರದ ಜೊತೆ ಜನರೂ ಕೈಜೋಡಿಸಬೇಕಾಗಿದೆ.