ಲಸಿಕೆಗಾಗಿ ಜನರು ಗುಂಪಾಗಿ ನಿಂತ ಚಿತ್ರ (ಪ್ರ.ವಾ., ಮೇ 8) ಪ್ರಕಟವಾಗಿದೆ. ನಮಗೆ ನಾಲ್ಕನೇ ತರಗತಿಯಲ್ಲಿ ‘ಸರತಿಯ ಸಾಲು’ ಎನ್ನುವ ಒಂದು ಪಾಠ ಇತ್ತು. ನಮ್ಮ ದೇಶದಲ್ಲಿ ಕ್ಯೂ ಅಂದರೆ ಒಬ್ಬರ ಹಿಂದೆ ಒಬ್ಬರು ನಿಲ್ಲದೆ ಒಂದು ಗುಂಪಾಗಿ ನಿಂತಿರುತ್ತಾರೆ. ಬ್ಯಾಂಕುಗಳಲ್ಲಿ ಟೋಕನ್ ವ್ಯವಸ್ಥೆ ಇತ್ತು. ಆನಂತರ ಕೆಲವು ಬ್ಯಾಂಕುಗಳಲ್ಲಿ ಅದು ಏಕೋ ಮಾಯವಾಯಿತು.
ನಾನು ಕೆಲವು ತಿಂಗಳ ಹಿಂದೆ ಕೋವಿಡ್ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಹೋಗಿದ್ದೆ. ಮುಂದಿನವರಿಂದ ಅಂತರ ಕಾಯ್ದುಕೊಂಡು ದೂರ ನಿಂತೆ. ನಡುವೆ ಇದ್ದ ಜಾಗದಲ್ಲಿ ಬೇರೆಯವರು ಬಂದು ತೂರಿಕೊಳ್ಳುತ್ತಿದ್ದರು. ಹಿಂದೆ ಇದ್ದವರು ಕೆಲವರು ನಿಮ್ಮನ್ನು ಮುಂದಕ್ಕೆ ತಳ್ಳುತ್ತಾರೆ ಇಲ್ಲವೇ ಪಕ್ಕಕ್ಕೆ ಬಂದು ನಿಲ್ಲುತ್ತಾರೆ. ಕೆಲವು ಸಂಸ್ಕೃತಿಗಳನ್ನು ನಮ್ಮ ಜನ ಕಲಿಯಲೇ ಇಲ್ಲ.
-ಪ್ರೊ. ಶಶಿಧರ್ ಪಾಟೀಲ್, ಬಾಗಲಕೋಟೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.