ಕೆಲವು ವಂಚನೆ ಪ್ರಕರಣಗಳ ಬಗ್ಗೆ ಪತ್ರಿಕೆಯಲ್ಲಿ (ಪ್ರ.ವಾ., ಜುಲೈ 9) ವರದಿಯಾಗಿದೆ. ‘ಚಲನ್ ತಿದ್ದಿ ವಂಚನೆ: ಸಬ್ ರಿಜಿಸ್ಟ್ರಾರ್ ಸೇರಿ ನಾಲ್ವರ ವಜಾ’, ‘ಕೆಪಿಎಸ್ಸಿ ಸದಸ್ಯನ ಸೋಗಿನಲ್ಲಿ ವಂಚನೆ: ಒಬ್ಬನ ಬಂಧನ’, ‘ಪವರ್ ಬ್ಯಾಂಕ್ ವಂಚಕನ ಬಂಧನ’ ಎಂಬ ಸುದ್ದಿಗಳ ಜೊತೆಗೆ ಮತ್ತೊಂದು ಪ್ರಮುಖ ಸುದ್ದಿ ಎಂದರೆ, ಭ್ರಷ್ಟಾಚಾರ ಆರೋಪದಲ್ಲಿ ಮುಖ್ಯಮಂತ್ರಿ ಸೇರಿ ಒಂಬತ್ತು ಮಂದಿ ಮೇಲಿನ ದೂರು ವಜಾ ಆಗಿರುವುದು. ಈ ಪ್ರಕರಣದಲ್ಲಿ, ರಾಜ್ಯಪಾಲರಿಂದ ಪೂರ್ವಾನುಮತಿ ಪಡೆಯದೇ ಇದ್ದ ಕಾರಣಕ್ಕೆ ದೂರನ್ನು ವಜಾ ಮಾಡಲಾಗಿದೆ. ಕ್ರಿಮಿನಲ್ ಆರೋಪಗಳ ವಿಷಯದಲ್ಲಿ ಆಡಳಿತಾರೂಢರಿಗೆ ಮತ್ತು ಸಾಮಾನ್ಯರಿಗೆ ಭಿನ್ನ ಭಿನ್ನ ನ್ಯಾಯ ಸರಿಯೇ? ‘ಅನುಮತಿ’ ಎಂಬ ಅಡ್ಡಗೋಡೆ ಏಕೆ? ಈ ಒಂದು ಅಡ್ಡಗೋಡೆಯಿಂದ ದೊಡ್ಡಕುಳಗಳು ತಪ್ಪಿಸಿಕೊಳ್ಳುವುದಕ್ಕೆ ಅವಕಾಶ ಸಿಗಬಹುದು.