ಪ್ರಧಾನಿ ನರೇಂದ್ರ ಮೋದಿ ಅವರು ಕಾನ್ಪುರದಲ್ಲಿ ಗಂಗಾತೀರದ ಮೆಟ್ಟಿಲು ಏರುವಾಗ ಮುಗ್ಗರಿಸಿದ್ದು ತಮಾಷೆಯ ಸಂಗತಿ ಅಲ್ಲ.ನಾನು ನೋಡಿದ ಹಾಗೆ,ಬಹಳಷ್ಟು ಸರ್ಕಾರಿ ಕಟ್ಟಡಗಳಲ್ಲಿ, ಉದ್ಯಾನಗಳಲ್ಲಿ ಮೆಟ್ಟಿಲುಗಳ ಅಂತರ ಏಕರೂಪ ಇರುವುದಿಲ್ಲ.ಮೊದಲ ಅಥವಾ ಕೊನೆಯ ಮೆಟ್ಟಿಲು ಇತರ ಮೆಟ್ಟಿಲುಗಳಿಗಿಂತ ಎರಡು– ಮೂರು ಸೆಂಟಿಮೀಟರ್ ಹೆಚ್ಚೋ ಕಮ್ಮಿಯೋ ಇರುತ್ತದೆ.ಕೆಲವೊಮ್ಮೆ ಮುಗ್ಗರಿಸಬೇಕು ಅಥವಾ ಹೃದಯಕ್ಕೆ ಝಟ್ಕಾಹೊಡೆಸಿಕೊಳ್ಳಬೇಕು.