ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಸಿವೆ ಕಾಳಿನಷ್ಟು ಸುಖಕ್ಕೆ...

ಅಕ್ಷರ ಗಾತ್ರ

ಕೋವಿಡ್‌ ಕಾಲದಲ್ಲಿ ನಡೆಯುತ್ತಿರುವ ಸರಳ ಮದುವೆಗಳ ಕುರಿತು ಸಿಬಂತಿ ಪದ್ಮನಾಭ ಅವರು ಬರೆದಿರುವ ಲೇಖನ (ಸಂಗತ, ಅ. 7) ಸಮಯೋಚಿತವಾಗಿದೆ ಮತ್ತು ಸರ್ವರೂ ಅನುಸರಿಸಬೇಕಾದ ಸಂಗತಿಗಳಿಂದ ಕೂಡಿದೆ. ಕೊರೊನಾ ಸೋಂಕಿನ ಕಾರಣದಿಂದಾದರೂ ಆಡಂಬರದ ಮದುವೆಗಳು ನಿಯಂತ್ರಣಕ್ಕೆ ಬಂದಿರುವುದು ಸಮಾಧಾನದ ಸಂಗತಿ. ಅದ್ಧೂರಿ ಮದುವೆಗಳು ಅನಗತ್ಯ ಖರ್ಚಿಗೆ ಕಾರಣವಾಗುತ್ತವೆ. ಹೀಗಾಗಿ, ಹೆಣ್ಣುಮಕ್ಕಳಾದರೆ ಖರ್ಚು, ಜವಾಬ್ದಾರಿ ಹೆಚ್ಚು ಎಂದು ತಿಳಿದು ಹೆಣ್ಣು ಭ್ರೂಣವನ್ನು ಹೊಸಕಿಹಾಕುವ ದುಷ್ಕೃತ್ಯ ಸಮಾಜದಲ್ಲಿ ನಡೆಯುತ್ತಿದೆ. ಅದರ ಬದಲು, ಸರಳ ಮದುವೆಗಳಾದರೆ ‘ಹೆಣ್ಣು ಹೆತ್ತರೆ ಹೊರೆ’ ಎನ್ನುವ ಭಾವನೆ ಹೋಗಬಹುದು.

ಆಡಂಬರದ ಮದುವೆಗಳಿಗೆ ಅನವಶ್ಯಕವಾಗಿ ವೆಚ್ಚ ಮಾಡುವ ಹಣವನ್ನು ತಮ್ಮ ಊರಿನ ಶಾಲೆಗೋ ಆಸ್ಪತ್ರೆಯ ಅಭಿವೃದ್ಧಿಗೋ ಕೊಡುವ ಉದಾರ ಮನಸ್ಸನ್ನು ಜನ ಹೊಂದಬೇಕು. ‘ಸಾಸಿವೆ ಕಾಳಿನಷ್ಟು ಸುಖಕ್ಕೆ ಸಾಗರದಷ್ಟು ದುಃಖ’ ಎಂಬಂತೆ, ಒಂದು ದಿನದ ಆಡಂಬರದ ಮದುವೆಗಾಗಿ ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುವವರೇ ಹೆಚ್ಚು. ನಂತರ ಆ ಸಾಲ ಹಾಗೂ ಬಡ್ಡಿಯನ್ನು ತೀರಿಸಲಾಗದೆ ಒದ್ದಾಡುವಂತಹ ಪರಿಸ್ಥಿತಿ ತಂದುಕೊಳ್ಳದೆ, ಸರಳವಾಗಿ ಮದುವೆ ಮಾಡಿಕೊಂಡು ಸಂತೋಷವಾಗಿ ಜೀವನ ಸಾಗಿಸುವುದು ಒಳ್ಳೆಯದು.

– ಶಿವನಕೆರೆ ಬಸವಲಿಂಗಪ್ಪ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT