ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಬಗೆ ಬಗೆ ಪಾಠ, ಬದಲಾದ ಮನೋಭಾವ

Last Updated 10 ನವೆಂಬರ್ 2020, 19:30 IST
ಅಕ್ಷರ ಗಾತ್ರ

‘ದುಡ್ಡಿನ ಉಳಿತಾಯದ ಪಾಠ’ ಕುರಿತ ವಿಶೇಷ ವರದಿ (ಪ್ರ.ವಾ., ನ. 2) ಉತ್ತಮವಾಗಿದೆ. ಜೀವನದ ಪ್ರತಿಯೊಂದು ಸೋಲು, ಕಷ್ಟ, ನಿರಾಸೆ ಸಹ ನಮಗೆ ಒಳ್ಳೆಯ ಪಾಠವನ್ನು ಕಲಿಸುತ್ತವೆ ಎಂಬುದಕ್ಕೆ ಕೊರೊನಾ ಉತ್ತಮ ಉದಾಹರಣೆ. ಹೆಚ್ಚಿನವರು ತಮ್ಮನ್ನು ಯಾವುದೂ ನಿಯಂತ್ರಿಸುವುದಿಲ್ಲ ಹಾಗೂ ತಮ್ಮ ಬಳಿ ಬೇಕಾದುದೆಲ್ಲ ಇದೆ ಎಂದು ಹಮ್ಮಿನಿಂದ ಇರುತ್ತಿದ್ದರು. ಅಂಥವರಿಗೆ ಕೊರೊನಾ ಸರಿಯಾದ ಪಾಠವನ್ನೇ ಕಲಿಸಿದೆ. ಕೆಲಸ ಮಾಡುವಲ್ಲಿ ಕೆಲವರಿಗೆ ಇದ್ದ ಅಸಡ್ಡೆ ಮನೋಭಾವ ಬದಲಾಗಿದೆ ಹಾಗೂ ಕೆಲಸಕ್ಕೆ ಗೌರವ ಕೊಡುವ ಮನೋಭಾವ ಬಂದಿದೆ. ಅನವಶ್ಯಕವಾಗಿ ದುಡ್ಡನ್ನು ಖರ್ಚು ಮಾಡುತ್ತಿದ್ದವರು ಸಹ ಈಗ ಬದಲಾಗಿದ್ದಾರೆ. ಹೇಗೆ ಬೇಕಾದರೂ ಬದುಕಬಹುದೆಂಬ ಮನಃಸ್ಥಿತಿ ಬದಲಾಗಿ ಹೀಗೂ ಬದುಕಬಹುದೆಂಬ ಹೊಸ ಮನೋಭಾವವನ್ನು ಕೊರೊನಾ ಹುಟ್ಟುಹಾಕಿರುವುದಂತೂ ನಿಜ. ವಿಜ್ಞಾನದ ಆವಿಷ್ಕಾರಗಳಿಂದ ಏನಾದೀತು ಎಂದು ಮೂಗು ಮುರಿಯುತ್ತಿದ್ದವರಿಗೆ ವರ್ಕ್‌ ಫ್ರಂ ಹೋಮ್, ಆನ್‌ಲೈನ್ ಕ್ಲಾಸ್ ಬದುಕನ್ನು ತಂದುಕೊಟ್ಟಿವೆ. ಅತಿ ಮುಖ್ಯವಾಗಿ ಸ್ವಚ್ಛತೆಯ ಪಾಠವನ್ನು ಕೊರೊನಾ ಕಲಿಸಿದೆ.

–ಕಡೂರು ಫಣಿಶಂಕರ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT