ಧರ್ಮಸ್ಥಳದಲ್ಲಿ ನೀರಿನ ಅಭಾವ ಇರುವುದರಿಂದ ಶ್ರೀಕ್ಷೇತ್ರಕ್ಕೆ ಬರುವ ಭಕ್ತರು ತಮ್ಮ ಪ್ರವಾಸವನ್ನು ಮುಂದೂಡುವಂತೆ ಅಲ್ಲಿನ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ಸೂಚಿಸಿರುವುದು ಸಕಾಲಿಕವಾಗಿದೆ (ಪ್ರ.ವಾ., ಮೇ 18). ದಿನಪತ್ರಿಕೆಗಳಲ್ಲಿ ಇತ್ತೀಚೆಗೆ ರಾಜಕೀಯದ ಸುದ್ದಿಗಳನ್ನು ಬಿಟ್ಟರೆ, ಪ್ರಧಾನವಾಗಿ ದೇವಸ್ಥಾನದ ಉದ್ಘಾಟನೆ, ವೈಭವದ ಜಾತ್ರೆ, ದೇವರ ಅದ್ಧೂರಿ ಮೆರವಣಿಗೆಯಂತಹ ಸುದ್ದಿಗಳೇ ಹೆಚ್ಚಾಗಿ ಕಾಣಸಿಗುತ್ತವೆ.