<p>ಕುಟುಂಬವನ್ನು ಆರ್ಥಿಕವಾಗಿ ಸಲಹುತ್ತಿದ್ದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದರೆ ಅವಲಂಬಿತರಿಗೆ ತಲಾ<br />₹ 1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ (ಪ್ರ.ವಾ., ಜೂನ್ 15). ಇದು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಮಾತ್ರ ಅನ್ವಯವಾಗಲಿದ್ದು, ಇದಕ್ಕೆ ಅಂದಾಜು ₹ 300 ಕೋಟಿ ಬೇಕಾಗಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ.</p>.<p>ಆರೋಗ್ಯ ಇಲಾಖೆ ಲೆಕ್ಕದ ಪ್ರಕಾರ, ಜೂನ್ 14ರವರೆಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 33,033. ಇವರಲ್ಲಿ ಎಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು? ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಜನ ಮರಣ ಹೊಂದಿದವರು ಇದ್ದಾರಲ್ಲವೇ? ಈ ಮೃತರಲ್ಲಿ ಪರಿಹಾರ ಪಡೆಯಲು ಆಗದಂತಹ ಬಹಳಷ್ಟು ಮಕ್ಕಳು, ವಯೋವೃದ್ಧರು, ನಿರುದ್ಯೋಗಿ ಯುವಕರು ಕೂಡಾ ಇದ್ದರಲ್ಲವೇ? ಇವರಾರಿಗೂ ಈ ಪರಿಹಾರ ಸಿಗಲಾರದು. ಆದ್ದರಿಂದ ಈ ಯೋಜನೆಗೆ ₹ 300 ಕೋಟಿಯಷ್ಟು ಹಣದ ಅವಶ್ಯಕತೆ ಇಲ್ಲ. ₹ 150 ಕೋಟಿಯಿಂದ 200 ಕೋಟಿ ಆಗಬಹುದು.</p>.<p>ಆದರೆ, ನಿಜವಾಗಿಯೂ ಕೋವಿಡ್ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ಬೆಡ್ ಮತ್ತು ಆಮ್ಲಜನಕ ಸಿಗದೆ ಬಹಳಷ್ಟು ಜನರು ಮನೆಯಲ್ಲಿ, ಆಸ್ಪತ್ರೆಯ ಕಾರಿಡಾರ್ಗಳಲ್ಲಿ, ಆಂಬುಲೆನ್ಸ್ಗಳಲ್ಲಿ, ರಸ್ತೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವುಗಳು ಕೋವಿಡ್ನಿಂದ ಆದವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾಕೆಂದರೆ ಇವರೆಲ್ಲಾ ಕೋವಿಡ್ ಪರೀಕ್ಷೆ ಮಾಡುವ ಮೊದಲೇ ಅಥವಾ ಫಲಿತಾಂಶ ಬರುವ ಮೊದಲೇ ಹಾಗೂ ಫಲಿತಾಂಶ ನೆಗೆಟಿವ್ ಬಂದು, ಉಸಿರಾಟದ ತೊಂದರೆಯಿಂದ ಜೀವ ತೆತ್ತಿದ್ದಾರೆ. ಇಂತಹವರಿಗೆ ಈ ಪರಿಹಾರ ಸಿಗಲಾರದು. ಕೋವಿಡ್ನಿಂದ ಸತ್ತವರ ಅಧಿಕೃತ ಲೆಕ್ಕಕ್ಕಿಂತ ದುಪ್ಪಟ್ಟು ಜನ ಈ ಮಹಾಮಾರಿಯಿಂದ ಸತ್ತಿದ್ದಾರೆ. ಅಂತಹ ಎಲ್ಲಾ ಬಡ ಕುಟುಂಬಗಳಿಗೆ ಪರಿಹಾರ ಸಿಗಬೇಕು. ಈ ದಿಸೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಸರ್ಕಾರ ಈ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲಿ.</p>.<p><strong>- ವಿ.ತಿಪ್ಪೇಸ್ವಾಮಿ,ಹಿರಿಯೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕುಟುಂಬವನ್ನು ಆರ್ಥಿಕವಾಗಿ ಸಲಹುತ್ತಿದ್ದ ವ್ಯಕ್ತಿ ಕೋವಿಡ್ನಿಂದ ಮೃತಪಟ್ಟಿದ್ದರೆ ಅವಲಂಬಿತರಿಗೆ ತಲಾ<br />₹ 1 ಲಕ್ಷ ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ (ಪ್ರ.ವಾ., ಜೂನ್ 15). ಇದು ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ ಮಾತ್ರ ಅನ್ವಯವಾಗಲಿದ್ದು, ಇದಕ್ಕೆ ಅಂದಾಜು ₹ 300 ಕೋಟಿ ಬೇಕಾಗಬಹುದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಇದು ಅತ್ಯಂತ ಶ್ಲಾಘನೀಯ ಕಾರ್ಯ.</p>.<p>ಆರೋಗ್ಯ ಇಲಾಖೆ ಲೆಕ್ಕದ ಪ್ರಕಾರ, ಜೂನ್ 14ರವರೆಗೆ ಕೋವಿಡ್ನಿಂದ ಮೃತಪಟ್ಟವರ ಸಂಖ್ಯೆ 33,033. ಇವರಲ್ಲಿ ಎಷ್ಟು ಜನ ಬಿಪಿಎಲ್ ಕಾರ್ಡ್ ಹೊಂದಿದ್ದರು? ಒಂದೇ ಕುಟುಂಬದಲ್ಲಿ ಮೂರ್ನಾಲ್ಕು ಜನ ಮರಣ ಹೊಂದಿದವರು ಇದ್ದಾರಲ್ಲವೇ? ಈ ಮೃತರಲ್ಲಿ ಪರಿಹಾರ ಪಡೆಯಲು ಆಗದಂತಹ ಬಹಳಷ್ಟು ಮಕ್ಕಳು, ವಯೋವೃದ್ಧರು, ನಿರುದ್ಯೋಗಿ ಯುವಕರು ಕೂಡಾ ಇದ್ದರಲ್ಲವೇ? ಇವರಾರಿಗೂ ಈ ಪರಿಹಾರ ಸಿಗಲಾರದು. ಆದ್ದರಿಂದ ಈ ಯೋಜನೆಗೆ ₹ 300 ಕೋಟಿಯಷ್ಟು ಹಣದ ಅವಶ್ಯಕತೆ ಇಲ್ಲ. ₹ 150 ಕೋಟಿಯಿಂದ 200 ಕೋಟಿ ಆಗಬಹುದು.</p>.<p>ಆದರೆ, ನಿಜವಾಗಿಯೂ ಕೋವಿಡ್ ಉತ್ತುಂಗದ ಸ್ಥಿತಿಯಲ್ಲಿ ಇದ್ದಾಗ ಬೆಡ್ ಮತ್ತು ಆಮ್ಲಜನಕ ಸಿಗದೆ ಬಹಳಷ್ಟು ಜನರು ಮನೆಯಲ್ಲಿ, ಆಸ್ಪತ್ರೆಯ ಕಾರಿಡಾರ್ಗಳಲ್ಲಿ, ಆಂಬುಲೆನ್ಸ್ಗಳಲ್ಲಿ, ರಸ್ತೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಸಾವುಗಳು ಕೋವಿಡ್ನಿಂದ ಆದವು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಯಾಕೆಂದರೆ ಇವರೆಲ್ಲಾ ಕೋವಿಡ್ ಪರೀಕ್ಷೆ ಮಾಡುವ ಮೊದಲೇ ಅಥವಾ ಫಲಿತಾಂಶ ಬರುವ ಮೊದಲೇ ಹಾಗೂ ಫಲಿತಾಂಶ ನೆಗೆಟಿವ್ ಬಂದು, ಉಸಿರಾಟದ ತೊಂದರೆಯಿಂದ ಜೀವ ತೆತ್ತಿದ್ದಾರೆ. ಇಂತಹವರಿಗೆ ಈ ಪರಿಹಾರ ಸಿಗಲಾರದು. ಕೋವಿಡ್ನಿಂದ ಸತ್ತವರ ಅಧಿಕೃತ ಲೆಕ್ಕಕ್ಕಿಂತ ದುಪ್ಪಟ್ಟು ಜನ ಈ ಮಹಾಮಾರಿಯಿಂದ ಸತ್ತಿದ್ದಾರೆ. ಅಂತಹ ಎಲ್ಲಾ ಬಡ ಕುಟುಂಬಗಳಿಗೆ ಪರಿಹಾರ ಸಿಗಬೇಕು. ಈ ದಿಸೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಆಸಕ್ತಿ ವಹಿಸಬೇಕು. ಸರ್ಕಾರ ಈ ಕುರಿತು ಮತ್ತೊಮ್ಮೆ ಪರಾಮರ್ಶೆ ನಡೆಸಲಿ.</p>.<p><strong>- ವಿ.ತಿಪ್ಪೇಸ್ವಾಮಿ,ಹಿರಿಯೂರು</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>