ರಾಜ್ಯದಲ್ಲಿ ನಕಲಿ ವೈದ್ಯರ ವಿಷವರ್ತುಲ ಸುದ್ದಿ ಓದಿ (ಪ್ರ.ವಾ, ಮೇ 12) ಆತಂಕವಾಯಿತು. ವೈದ್ಯಕೀಯ ಕ್ಷೇತ್ರದ ಕುರಿತು ದಶಕಗಳ ಹಿಂದೆ ಕೇಳುತ್ತಿದ್ದ ಬೆಚ್ಚಿಬೀಳಿಸುವ ಕತೆಗಳು ಜನರನ್ನು ಆಸ್ಪತ್ರೆಗಳಿಂದ ದೂರ ಇಟ್ಟಿದ್ದವು. ಈ ಕಾಲದಲ್ಲೂ ಇಂತಹ ವೈದ್ಯರ ಜಾಲ ಬಲಿಯುತ್ತಿರುವುದು ಭಯ ಹುಟ್ಟಿಸುತ್ತದೆ.
ಈ ಸುದ್ದಿಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡು, ಕೂಡಲೇ ಕ್ರಮಕ್ಕೆ ಮುಂದಾಗಬೇಕಿದೆ. ಯಾವ ಸಮಾಜದಲ್ಲಿ ವೈದ್ಯಕೀಯ ಸೇವೆ, ಭ್ರಷ್ಟ ಕೂಪಕ್ಕೆ ತಳ್ಳಲ್ಪಡುತ್ತದೆಯೋ ಆ ಸಮಾಜಕ್ಕೆ ಉಳಿಗಾಲವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ.