ಪ್ರಸಾರ ಭಾರತಿಯು ರಾಜ್ಯದ ಪ್ರಾದೇಶಿಕ ಆಕಾಶವಾಣಿ ಕೇಂದ್ರಗಳಿಂದ ಬಿತ್ತರವಾಗುತ್ತಿರುವ ಕಾರ್ಯಕ್ರಮಗಳಿಗೆ ಕತ್ತರಿ ಹಾಕಿ, ರಾಜ್ಯದಾದ್ಯಂತ ಏಕರೂಪದ ಸೇವೆ ಒದಗಿಸಲು ಚಿಂತನೆ ನಡೆಸಿರುವುದು (ಪ್ರ.ವಾ., ಡಿ. 17) ಶ್ರೋತೃಗಳನ್ನು ಚಿಂತೆಗೀಡು ಮಾಡಿದೆ. ಇಂದು ಮನರಂಜನೆಗೆ ಮತ್ತು ಮಾಹಿತಿಗೆ ಅನೇಕ ಸಂವಹನ ಕೊಂಡಿಗಳಿವೆ. ಆದರೆ ಅಂದಿನ ಕಾಲದಿಂದಲೂ ಆಕಾಶವಾಣಿಯಿಂದ ಸುದ್ದಿ, ಸಮಾಚಾರ, ಜ್ಞಾನ-ವಿಜ್ಞಾನ, ಕೃಷಿರಂಗ, ವಾರ್ತೆಗಳು, ಜನಪದ, ಸೋಬಾನೆ ಪದಗಳು, ರೇಡಿಯೊ ನಾಟಕ, ಸಂಗೀತ, ಮೆಚ್ಚಿನ ಚಿತ್ರಗೀತೆಗಳು, ಭಾವಗೀತೆ ಎಲ್ಲವನ್ನೂ ಕೇಳುತ್ತಾ ಬಂದಿದ್ದೇವೆ.