ರಾಜ್ಯದ ಕಾಡಂಚಿನ ಹಳ್ಳಿಗಳಲ್ಲಿ ಹುಲಿ,ಚಿರತೆ ಮತ್ತು ಆನೆಗಳ ಕಾಟ ದಿನೇ ದಿನೇ ಹೆಚ್ಚುತ್ತಿದೆ. ಈ ಪ್ರಾಣಿಗಳಿಂದ ರಾಸುಹಾನಿ, ಜನರ ಪ್ರಾಣಹಾನಿ ಮತ್ತು ಬೆಳೆಹಾನಿ ನಿರಂತರವಾಗಿ ನಡೆಯುತ್ತಿದೆ. ರೈತಜೀವನ ಇಷ್ಟು ಹದಗೆಟ್ಟಿದ್ದನ್ನು ನಾಲ್ಕೈದು ದಶಕಗಳಲ್ಲಿ ನಾನು ಕಂಡಿದ್ದಿಲ್ಲ. ‘ಅರಣ್ಯನಾಶ ಹೆಚ್ಚು ಆಗಿರುವುದರಿಂದ ಹೀಗಾಗಿದೆ’ ಎಂದು ಪರಿಸರವಾದಿಗಳು ಹೇಳುತ್ತಾರೆ.