ಅವರ ಧೈರ್ಯ, ಸ್ಥೈರ್ಯ, ಕ್ಷಮತೆ, ರಕ್ಷಣಾ ಪಡೆಯ ಸಾಹಸ, ಅಂತಿಮದಲ್ಲಿ ಅವರ ಜೀವಂತ ರಕ್ಷಣೆ ಬೆರಗಾಗಿಸಿದೆ. ಪೂರ್ಣ ಬೆಳೆ ನಾಶವಾದರೂ ಪರವಾಗಿಲ್ಲ, ಮಕ್ಕಳು ಉಳಿದರೆ ಸಾಕು ಎಂದು ಪ್ರವಾಹದ ನೀರನ್ನು ತಮ್ಮ ಗದ್ದೆಗೆ ಹರಿಯಬಿಟ್ಟ ಆ ರೈತರ ಔದಾರ್ಯಕ್ಕೆ ಮಿಗಿಲೇ ಇಲ್ಲ. ರಕ್ಷಣಾ ಪಡೆಯ ಸೇವೆಗೆಂದು ಸ್ಥಳೀಯರ ಉಪಚಾರ, ತ್ಯಾಗ ನಿಜಕ್ಕೂ ಪ್ರಶಂಸನೀಯ.