ಜೆಡಿಎಸ್ ಜೊತೆ ಕೈಜೋಡಿಸಿ ಅಧಿಕಾರ ಹಂಚಿಕೊಂಡಿರುವ ಕಾಂಗ್ರೆಸ್ ನಡೆಯಲ್ಲಿ ಸ್ವಹಿತಾಸಕ್ತಿಯೂ ಇದೆ. ಅಧಿಕಾರದಿಂದ ವಂಚಿತರಾದ ಬಿಜೆಪಿ ನಾಯಕರು ಕೆರಳಿ, ಸಮ್ಮಿಶ್ರ ಸರ್ಕಾರ ಉರುಳಿಸಲು ಹುನ್ನಾರ ಹೂಡುವುದು ಅನಿರೀಕ್ಷಿತವಲ್ಲ. ಆದಕಾರಣ, ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳಿಗೆ ಹೆಚ್ಚಿನ ಜವಾಬ್ದಾರಿ ಇದೆ. ಮಿತ್ರರೇ ಶತ್ರುಗಳಂತೆ ದಿನಕ್ಕೊಂದು ಹೇಳಿಕೆ ನೀಡುವುದು, ಪತ್ರ ಸಮರಕ್ಕಿಳಿದಿರುವುದು ವಿವೇಕಯುತ ನಡವಳಿಕೆಯಾಗದು.