ಕೋವಿಡ್ನಿಂದ ಮೃತಪಟ್ಟ 1,200 ಅನಾಥ ಶವಗಳ ಸಾಮೂಹಿಕ ಅಸ್ಥಿ ವಿಸರ್ಜನೆಯನ್ನು ಕಂದಾಯ ಸಚಿವರು ಈ ಮೊದಲು ಶಾಸ್ತ್ರೋಕ್ತವಾಗಿ ನೆರವೇರಿಸಿದ್ದರು. ಈಗ ಅವರು ಈ ವ್ಯಕ್ತಿಗಳಿಗೆ ಪಿತೃಪಕ್ಷದ ವೇಳೆ ಪಿಂಡಪ್ರದಾನ ಮಾಡಲು ಮುಂದಾಗಿರುವುದು ಸರ್ವರೂ ಮೆಚ್ಚುವಂತಹ ಮತ್ತು ಸಂತಸಪಡುವಂತಹ ಕಾರ್ಯವಾಗಿದೆ. ಕೋವಿಡ್ ತೀವ್ರವಾಗಿದ್ದ ಸಂದರ್ಭದಲ್ಲಿ ತಮ್ಮ ಕ್ಷೇತ್ರಕ್ಕೆ ಭೇಟಿ ಕೊಟ್ಟು ಸಂದರ್ಭವನ್ನು ಸಮರ್ಪಕವಾಗಿ ನಿಭಾಯಿಸಲು ಮುಂದಾಗದ ಶಾಸಕರಿಗೆ ಮಾದರಿಯಾಗುವಂತಹ ನಡೆ ಇದಾಗಿದೆ.