ಕೆಲವೊಮ್ಮೆ ಚಿರತೆಗಳು ನರಹಂತಕಗಳಾಗಿ ಬದಲಾಗುವ ಸಂಭವವೂ ಇರುತ್ತದೆ. ಆದ್ದರಿಂದ ಹೆಚ್ಚುತ್ತಿರುವ ಚಿರತೆಗಳ ಸಂಖ್ಯೆಗನುಗುಣವಾಗಿ ಅವು ನಿರ್ಭಯವಾಗಿ ಬದುಕುಳಿಯಲು ಅವಕಾಶವನ್ನು ನೀಡಬೇಕಿರುವುದು ಅವಶ್ಯಕ. ಈ ದಿಸೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ಚಿಂತಿಸಬೇಕಾಗಿದೆ. ಅರಣ್ಯದೊಳಗೆ ನಡೆಯುವ ಅನಗತ್ಯ ಕಾಮಗಾರಿಗಳು, ಗಣಿಗಾರಿಕೆ, ರೆಸಾರ್ಟ್ ನಿರ್ಮಾಣದಂತಹ ಅಪಾಯಕಾರಿ ಕಾಮಗಾರಿಗಳನ್ನು ಸರ್ಕಾರಗಳು ತಡೆಯಲೇಬೇಕು. ಇಲ್ಲದಿದ್ದರೆ ಮಾನವ– ವನ್ಯಜೀವಿ ಸಂಘರ್ಷ ನಿರಂತರವಾಗಿ ನಡೆಯುತ್ತಲೇ ಇರುತ್ತದೆ.
-ಮಹೇಶ್ವರ ಹುರುಕಡ್ಲಿ, ಬಾಚಿಗೊಂಡನಹಳ್ಳಿ, ಹಗರಿಬೊಮ್ಮನಹಳ್ಳಿ