ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ಭತ್ಯೆ: ಹಿಮಾಚಲ ಮಾದರಿಯಾಗಲಿ

Last Updated 6 ನವೆಂಬರ್ 2019, 20:30 IST
ಅಕ್ಷರ ಗಾತ್ರ

ನಾನೊಬ್ಬ ರಾಜ್ಯ ಸರ್ಕಾರದ ನಿವೃತ್ತ ನೌಕರ. ಸರ್ಕಾರ ನೀಡುತ್ತಿರುವ ಪಿಂಚಣಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿದೆ. ಆದರೆ, ಆರೋಗ್ಯ ಸಮಸ್ಯೆಗಳಿಂದಾಗಿ ಈ ತುಟ್ಟಿ ಕಾಲದಲ್ಲಿ ಬದುಕು ನಡೆಸುವುದು ಕಷ್ಟವಾಗುತ್ತಿದೆ.

ಹಿಮಾಚಲ ಪ್ರದೇಶವು 2014ರಿಂದ ಸರ್ಕಾರಿ ನೌಕರರಿಗೆ 65, 70 ಮತ್ತು 75 ವರ್ಷ ಪೂರ್ಣಗೊಂಡಾಗ ಕ್ರಮವಾಗಿ ಶೇ 5, 10 ಹಾಗೂ ಶೇ15 ಪಿಂಚಣಿ ಭತ್ಯೆ ಮಂಜೂರು ಮಾಡುತ್ತಿದೆ. ಇದನ್ನು ದೇಶದಲ್ಲಿನ ಎಲ್ಲಾ ರಾಜ್ಯಗಳೂ ಅನುಸರಿಸಿದರೆ ನನ್ನಂತಹ ನಿವೃತ್ತ ನೌಕರರಿಗೆ ಬಹಳ ಅನುಕೂಲ ಆಗುತ್ತದೆ. ಕರ್ನಾಟಕ ಸರ್ಕಾರ ಈ ಕುರಿತು ಪರಿಶೀಲನೆ ನಡೆಸಿ, ಅಗತ್ಯ ಆದೇಶವನ್ನು ಹೊರಡಿಸಲಿ.

–ಟಿ.ಜಿ. ಸತೀಶ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT