ರೈತರ ಸಾಲಮನ್ನಾ, ಸಚಿವ ಸಂಪುಟ ವಿಸ್ತರಣೆ ಮತ್ತು ಬಜೆಟ್ ಮಂಡನೆ ವಿಷಯವಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಸುಕಿನ ಗುದ್ದಾಟ ನಡೆಸುತ್ತಿರುವುದನ್ನು ನೋಡಿದರೆ ಯಾವುದೇ ಕ್ಷಣದಲ್ಲೂ ಸರ್ಕಾರ ಪತನವಾಗಬಹುದು ಎನಿಸುತ್ತದೆ.
ಎರಡು ಪಕ್ಷಗಳ ಗುದ್ದಾಟದಲ್ಲಿ ರಾಜ್ಯದ ಅಭಿವೃದ್ಧಿಕುಂಠಿತಗೊಳ್ಳುತ್ತಿದೆ. ಗೊಂದಲಗಳ ನಿವಾರಣೆಗಾಗಿ ಸಮನ್ವಯ ಸಮಿತಿ ರಚಿಸಲಾಗಿದ್ದರೂ ಕೆಲವರು ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದಾರೆ. ಇದು ಸರಿಯಲ್ಲ. ಉಭಯ ಪಕ್ಷಗಳ ನಾಯಕರು ಆದಷ್ಟು ಬೇಗ ತಮ್ಮ ಭಿನ್ನಾಭಿಪ್ರಾಯ ಪರಿಹರಿಸಿಕೊಂಡು ಆಡಳಿತದತ್ತ ಗಮನ ಹರಿಸಬೇಕು.