<p>ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸುಮಾರು 14,000 ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸದ ಧೋರಣೆ ಖಂಡಿಸಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಅವರು ವಿಧಾನ ಪರಿಷತ್ನಲ್ಲಿ ಮಂಗಳವಾರ ಧರಣಿ ಹೂಡಿದಾಗ, ವಿರೋಧ ಪಕ್ಷದ ಸದಸ್ಯರೂ ಅವರಿಗೆ ಬೆಂಬಲ ನೀಡಿದ್ದು ಸ್ಮರಣೀಯ. ಈ ಧರಣಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಗೌರವಧನ ಪಾವತಿಗೆ ಸೂಚನೆ ನೀಡಿದ್ದು ಸಕಾರಾತ್ಮಕ ನಡೆ.</p>.<p>ಆದರೆ ಈ ಸಂದರ್ಭದಲ್ಲಿ ಇವರೆಲ್ಲರಿಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮರೆತುಹೋದಂತಿದೆ. ಅತಿಥಿ ಬೋಧಕರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯಗಳಲ್ಲಿ, ಸರ್ಕಾರದ ಪ್ರಾಥಮಿಕ, ಪ್ರೌಢ ಮತ್ತು ವಸತಿ ಶಾಲೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ತಾರತಮ್ಯರಹಿತವಾಗಿ ವೇತನ ಪಾವತಿಸಬೇಕಲ್ಲವೇ?</p>.<p>ಜನಪ್ರತಿನಿಧಿಗಳು ಕರ್ನಾಟಕದ ಶೈಕ್ಷಣಿಕ ಕಣಜವನ್ನು ಹೀಗೆ ಒಡೆದು ನೋಡದೆ, ಬಾಕಿ ಇರುವ ಈ ಎಲ್ಲರಿಗೂ ಗೌರವಧನ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.</p>.<p><em><strong>-ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳ ಸುಮಾರು 14,000 ಅತಿಥಿ ಉಪನ್ಯಾಸಕರಿಗೆ ಗೌರವಧನ ಪಾವತಿಸದ ಧೋರಣೆ ಖಂಡಿಸಿ ಬಿಜೆಪಿ ಸದಸ್ಯ ಆಯನೂರು ಮಂಜುನಾಥ ಅವರು ವಿಧಾನ ಪರಿಷತ್ನಲ್ಲಿ ಮಂಗಳವಾರ ಧರಣಿ ಹೂಡಿದಾಗ, ವಿರೋಧ ಪಕ್ಷದ ಸದಸ್ಯರೂ ಅವರಿಗೆ ಬೆಂಬಲ ನೀಡಿದ್ದು ಸ್ಮರಣೀಯ. ಈ ಧರಣಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಕ್ಷಣವೇ ಗೌರವಧನ ಪಾವತಿಗೆ ಸೂಚನೆ ನೀಡಿದ್ದು ಸಕಾರಾತ್ಮಕ ನಡೆ.</p>.<p>ಆದರೆ ಈ ಸಂದರ್ಭದಲ್ಲಿ ಇವರೆಲ್ಲರಿಗೂ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಮರೆತುಹೋದಂತಿದೆ. ಅತಿಥಿ ಬೋಧಕರು ಸರ್ಕಾರಿ ಪದವಿ ಕಾಲೇಜುಗಳಲ್ಲಿ ಮಾತ್ರವಲ್ಲ, ವಿಶ್ವವಿದ್ಯಾಲಯಗಳಲ್ಲಿ, ಸರ್ಕಾರದ ಪ್ರಾಥಮಿಕ, ಪ್ರೌಢ ಮತ್ತು ವಸತಿ ಶಾಲೆಗಳಲ್ಲೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೂ ತಾರತಮ್ಯರಹಿತವಾಗಿ ವೇತನ ಪಾವತಿಸಬೇಕಲ್ಲವೇ?</p>.<p>ಜನಪ್ರತಿನಿಧಿಗಳು ಕರ್ನಾಟಕದ ಶೈಕ್ಷಣಿಕ ಕಣಜವನ್ನು ಹೀಗೆ ಒಡೆದು ನೋಡದೆ, ಬಾಕಿ ಇರುವ ಈ ಎಲ್ಲರಿಗೂ ಗೌರವಧನ ಪಾವತಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು.</p>.<p><em><strong>-ಡಾ. ಸಿದ್ಧಲಿಂಗಸ್ವಾಮಿ ಹಿರೇಮಠ, ಮೈಸೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>