ನಾವು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನಲ್ಲಿ ಕೃಷಿ ಮಾಡುತ್ತಿದ್ದೇವೆ. ಪ್ರತಿವರ್ಷ ಹೇಗೋ ಮಾಡಿ ಕೃಷಿ ಸಾಲವನ್ನು ಸರಿಯಾದ ಸಮಯಕ್ಕೆ ರಿನ್ಯೂವಲ್ ಮಾಡಿಟ್ಟುಕೊಂಡು ಬಂದಿದ್ದೆವು. 2018ರ ಮಾರ್ಚ್ನಲ್ಲಿ ಸಾಲಮನ್ನಾದ ಸುದ್ದಿ ಹುಟ್ಟಿತು. ಆಗ ನಮಗೆ ಸರ್ಕಾರದಿಂದ, ಬ್ಯಾಂಕ್ನಿಂದ ನಿರ್ದಿಷ್ಟ ಮಾಹಿತಿ ಸಿಗದೇ ರಿನ್ಯೂವಲ್ ಮಾಡದೇ ಸುಮ್ಮನಾದೆವು.ಈಗ, ಬ್ಯಾಂಕ್ನವರು ಸಾಲ ಕಟ್ಟಿಲ್ಲ ಎಂಬ ಕಾರಣಕ್ಕೆ ನೋಟಿಸ್ ಕಳಿಸಿದ್ದಾರೆ.