ಭಾರತದ ಪ್ರಧಾನಿ ಗದ್ದುಗೆ ಏರಿದ ಕನ್ನಡಿಗ ಎಚ್.ಡಿ.ದೇವೇಗೌಡರು ಹಿಂದಿ ಬಾರದ ಕಾರಣಕ್ಕೆ ಮೂದಲಿಕೆಗೆ ಒಳಗಾದಂತೆ ಮತ್ತೆಷ್ಟು ಕನ್ನಡಿಗರು ಅಪಮಾನಿತರಾಗಬೇಕು? ಒಕ್ಕೂಟ ವ್ಯವಸ್ಥೆಯಲ್ಲಿ ಹೆಚ್ಚು ರಾಜ್ಯಗಳು ಹಿಂದಿಯನ್ನು ಸಂಪರ್ಕ ಭಾಷೆಯಾಗಿ ಬಳಸುತ್ತಿವೆಯೆಂದರೆ, ಅದು ಆ ಭಾಷೆಗಿರುವ ಶಕ್ತಿ ಎಂಬುದನ್ನು ಗಮನಿಸಬೇಕಾಗಿದೆ. ಪರಿಸ್ಥಿತಿ ಹೀಗಿರುವಲ್ಲಿ, ಒಂದು ದಿನದ ಹಿಂದಿ ಆಚರಣೆ ಹೇರಿಕೆಯಾಗಿ ಹೇಗೆ ಕಾಣುತ್ತದೆ? ಬಾಗಿಲಲ್ಲಿ ಈಗಾಗಲೇ ಆನೆ ಬಂದು ನಿಂತಿರುವಾಗ ಬಾಲಕ್ಕೆ ಕೊಸರಾಡಿದರೆ ಅದು ಪ್ರಾಯೋಗಿಕ ಅಲ್ಲ. ಕನ್ನಡ ನಿತ್ಯ ಉಸಿರಾಡುವ ಹಾಗೆ ಅರಿವು, ಅಧ್ಯಯನ, ಅರ್ಹತೆ ಆಧಾರದ ಮೇಲೆ ಪ್ರಯೋಗ ಆಗಬೇಕು.