ಶಬರಿಮಲೆ ದೇವಸ್ಥಾನ ಪ್ರವೇಶ ಮಾಡಿದ ಸ್ತ್ರೀಯರಿಗೆ ನಿಜವಾಗಿ ದೇವರ ಮೇಲೆ ಭಕ್ತಿ ಇದ್ದಿದ್ದೇ ಆದರೆ ಅವರು ದೇವಸ್ಥಾನ ಪ್ರವೇಶಕ್ಕೂ ಮೊದಲು ಕೆಲವು ಆಚಾರ, ನಿಯಮಗಳ ಪಾಲನೆ ಮಾಡಬೇಕಿತ್ತು. ಇರುಮುಡಿ ಇಲ್ಲದೆ, ಹದಿನೆಂಟು ಮೆಟ್ಟಿಲುಗಳನ್ನೇರದೆ ಹಿಂದಿನಿಂದ ದೇವಸ್ಥಾನ ಪ್ರವೇಶಿಸುವ ಆತುರ ತೋರಿಸಿದ್ದು ಏಕೆ? ಭಕ್ತಿಗಿಂತ ಮುಖ್ಯವಾಗಿ ಬಹುಸಂಖ್ಯಾತ ಭಕ್ತರ ಶ್ರದ್ಧೆಯನ್ನು ಹಾಳು ಮಾಡುವುದು, ಅವರ ನಂಬಿಕೆಯನ್ನು ಗಾಸಿಗೊಳಿಸುವುದು ಅವರ ಉದ್ದೇಶವಾಗಿತ್ತು ಎಂದು ತೋರುತ್ತದೆ. ಪ್ರತಿಯೊಂದು ದೇವಸ್ಥಾನ ಅಥವಾ ಧಾರ್ಮಿಕ ಕ್ಷೇತ್ರಕ್ಕೆ ಅದರದ್ದೇ ಆದ ನಿಯಮ, ಸಂಪ್ರದಾಯ ಇರುತ್ತದೆ. ಅದನ್ನು ಎಲ್ಲರೂ ಗೌರವಿಸಬೇಕು.