ಇನ್ನು ಕಾನೂನಿನ ಪಾಲನೆ ಮಾಡಬೇಕಾದ ಪೊಲೀಸರು ಸಹ ಎಲ್ಲಾ ಮುಗಿದ ಮೇಲೆ ಬಂದು, ಇದೊಂದು ಸಿನಿಮಾ ಶೂಟಿಂಗ್ ಎಂದು ತಾವು ಭಾವಿಸಿದ್ದರಿಂದ ತಡೆಯಲಿಲ್ಲ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಹಾಸ್ಯಾಸ್ಪದ. ಟಿ.ವಿ ಮಾಧ್ಯಮದವರಂತೂ ತಮ್ಮ ವಾಹಿನಿಗಳಲ್ಲಿ ಈ ಪ್ರಸಂಗವನ್ನು ವೈಭವೀಕರಿಸಿ ಅದಕ್ಕೆ ‘ಹೊಡಿ ಮಗ- ಹೊಡಿ ಮಗ, ಬಿಸಿ ಬಿಸಿ ಕಜ್ಜಾಯ...’ ಮುಂತಾದ ಸಿನಿಮಾ ಗೀತೆಗಳನ್ನು ಸೇರಿಸಿ ರೋಚಕವಾಗಿ ಬಿತ್ತರಿಸಿದ್ದು ಆಘಾತಕಾರಿ. ವೆಂಕಟ್ ಒಬ್ಬ ಮಾನಸಿಕ ಅಸ್ವಸ್ಥ. ಆತನಿಗೆ ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಂಡು, ಸರಿದಾರಿಗೆ ತರಬೇಕಾದ ಜವಾಬ್ದಾರಿ ಎಲ್ಲರ ಮೇಲಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಈ ರೀತಿಯ ಧರ್ಮದೇಟಿನಪ್ರಕರಣಗಳಿಗೆ ಇನ್ನಾದರೂ ಕಟ್ಟುನಿಟ್ಟಿನ ಕಡಿವಾಣ ಬೀಳಬೇಕಾಗಿದೆ.