<p>ರಾಜ್ಯದಲ್ಲಿ ಮೌಢ್ಯ ನಿವಾರಣೆಗೆ ಕಾಯ್ದೆಯನ್ನು ಜಾರಿಗೆ ತಂದಿರುವುದು ಸಂತೋಷದ ಸಂಗತಿ. ಈಗಿನ ವೈಜ್ಞಾನಿಕ ಯುಗದಲ್ಲೂ ಕೆಲವು ಅನಿಷ್ಟ ಪದ್ಧತಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಈ ಕಾಯ್ದೆಯಿಂದ ಅವುಗಳ ನಿಯಂತ್ರಣವಾದರೆ ಅಷ್ಟೇ ಸಾಕು.ಕಾಯ್ದೆಯು ಕೇವಲ ತೋರಿಕೆಗೆ ಜಾರಿಯಾಗದೆ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ. ಕೆಲವೆಡೆ ಜಾತ್ರೆ, ಹಬ್ಬ, ಸಂತೆಯ ಸಮಯದಲ್ಲಿ ಕೆಲವರು ಮಂತ್ರವಾದಿಗಳ ವೇಷ ತೊಟ್ಟು ರಾಜಾರೋಷವಾಗಿ ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದ್ದಾರೆ. ಇಂತಹವರನ್ನು ಮೊದಲು ಶಿಕ್ಷಿಸಬೇಕು.</p>.<p>ಹಳ್ಳಿಗಳ ಕಡೆ ಈಗಲೂ ದೆವ್ವ ಬಿಡಿಸುತ್ತೇನೆಂದು ಹೇಳಿ ಜನಸಾಮಾನ್ಯರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗುತ್ತದೆ. ಇನ್ನು ಕೆಲವರು, ದೇವರು ಮೈಮೇಲೆ ಬರುತ್ತದೆಂದು ಹೇಳಿ, ಜನರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿದ್ದಾರೆ.</p>.<p>ಮೂಢನಂಬಿಕೆಗಳ ವಿಚಾರದಲ್ಲಿ ಜನರ ಮನಃಸ್ಥಿತಿಯೂ ಬದಲಾಗಬೇಕು. ಆಗ ಮಾತ್ರ ಮೂಢನಂಬಿಕೆಗಳನ್ನು ಸಮಾಜದಿಂದ ಬೇರು ಸಮೇತ ಕಿತ್ತುಹಾಕಲು ಸಾಧ್ಯ.</p>.<p><em><strong>–ರಾಜು ಬಿ. ಲಕ್ಕಂಪುರ,ಜಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದಲ್ಲಿ ಮೌಢ್ಯ ನಿವಾರಣೆಗೆ ಕಾಯ್ದೆಯನ್ನು ಜಾರಿಗೆ ತಂದಿರುವುದು ಸಂತೋಷದ ಸಂಗತಿ. ಈಗಿನ ವೈಜ್ಞಾನಿಕ ಯುಗದಲ್ಲೂ ಕೆಲವು ಅನಿಷ್ಟ ಪದ್ಧತಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಈ ಕಾಯ್ದೆಯಿಂದ ಅವುಗಳ ನಿಯಂತ್ರಣವಾದರೆ ಅಷ್ಟೇ ಸಾಕು.ಕಾಯ್ದೆಯು ಕೇವಲ ತೋರಿಕೆಗೆ ಜಾರಿಯಾಗದೆ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ. ಕೆಲವೆಡೆ ಜಾತ್ರೆ, ಹಬ್ಬ, ಸಂತೆಯ ಸಮಯದಲ್ಲಿ ಕೆಲವರು ಮಂತ್ರವಾದಿಗಳ ವೇಷ ತೊಟ್ಟು ರಾಜಾರೋಷವಾಗಿ ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದ್ದಾರೆ. ಇಂತಹವರನ್ನು ಮೊದಲು ಶಿಕ್ಷಿಸಬೇಕು.</p>.<p>ಹಳ್ಳಿಗಳ ಕಡೆ ಈಗಲೂ ದೆವ್ವ ಬಿಡಿಸುತ್ತೇನೆಂದು ಹೇಳಿ ಜನಸಾಮಾನ್ಯರಿಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಲಾಗುತ್ತದೆ. ಇನ್ನು ಕೆಲವರು, ದೇವರು ಮೈಮೇಲೆ ಬರುತ್ತದೆಂದು ಹೇಳಿ, ಜನರ ನಡುವಿನ ಸಂಬಂಧಗಳನ್ನು ಹಾಳು ಮಾಡುತ್ತಿದ್ದಾರೆ.</p>.<p>ಮೂಢನಂಬಿಕೆಗಳ ವಿಚಾರದಲ್ಲಿ ಜನರ ಮನಃಸ್ಥಿತಿಯೂ ಬದಲಾಗಬೇಕು. ಆಗ ಮಾತ್ರ ಮೂಢನಂಬಿಕೆಗಳನ್ನು ಸಮಾಜದಿಂದ ಬೇರು ಸಮೇತ ಕಿತ್ತುಹಾಕಲು ಸಾಧ್ಯ.</p>.<p><em><strong>–ರಾಜು ಬಿ. ಲಕ್ಕಂಪುರ,ಜಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>