ರಾಜ್ಯದಲ್ಲಿ ಮೌಢ್ಯ ನಿವಾರಣೆಗೆ ಕಾಯ್ದೆಯನ್ನು ಜಾರಿಗೆ ತಂದಿರುವುದು ಸಂತೋಷದ ಸಂಗತಿ. ಈಗಿನ ವೈಜ್ಞಾನಿಕ ಯುಗದಲ್ಲೂ ಕೆಲವು ಅನಿಷ್ಟ ಪದ್ಧತಿಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿವೆ. ಈ ಕಾಯ್ದೆಯಿಂದ ಅವುಗಳ ನಿಯಂತ್ರಣವಾದರೆ ಅಷ್ಟೇ ಸಾಕು.ಕಾಯ್ದೆಯು ಕೇವಲ ತೋರಿಕೆಗೆ ಜಾರಿಯಾಗದೆ, ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬರಲಿ. ಕೆಲವೆಡೆ ಜಾತ್ರೆ, ಹಬ್ಬ, ಸಂತೆಯ ಸಮಯದಲ್ಲಿ ಕೆಲವರು ಮಂತ್ರವಾದಿಗಳ ವೇಷ ತೊಟ್ಟು ರಾಜಾರೋಷವಾಗಿ ಜನರಲ್ಲಿ ಮೂಢನಂಬಿಕೆಯನ್ನು ಬಿತ್ತುತ್ತಿದ್ದಾರೆ. ಇಂತಹವರನ್ನು ಮೊದಲು ಶಿಕ್ಷಿಸಬೇಕು.