ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯ, ಸಂಶಯಕ್ಕೆ ಬೇಕು ಮಾಹಿತಿ ಮದ್ದು

Last Updated 20 ಏಪ್ರಿಲ್ 2021, 19:30 IST
ಅಕ್ಷರ ಗಾತ್ರ

ಕೋವಿಡ್‌ ಕಾಲದ ನೂರೊಂದು ಅಭಾವಗಳಲ್ಲಿ ಮಾಹಿತಿ ಅಭಾವವೇ ಅತ್ಯಂತ ದುರ್ಭರವಾಗಿದೆ. ಭಯಗ್ರಸ್ತರಿಗೆ ನೂರೊಂದು ಬಗೆಯ ಮಾಹಿತಿ, ಮಾರ್ಗಸೂಚಿ ಬೇಕಾಗಿದೆ. ಉದಾಹರಣೆಗೆ, ಅಂಗಡಿಯಲ್ಲಿ ಸಿಗುವ ಸ್ಟೀರಾಯ್ಡ್‌ ಔಷಧವನ್ನು ಬಳಸಬಹುದೇ? ಅದರ ಅಡ್ಡ ಪರಿಣಾಮ ಏನು? ಮನೆಯಲ್ಲಿ ವೆಂಟಿಲೇಟರ್‌ ಇಲ್ಲದೆಯೂ ಉಸಿರೆಳೆತದ ಪ್ರಮಾಣವನ್ನು ಹೆಚ್ಚಿಸುವ ಸರಳ ಉಪಾಯ ಏನು? ಆಕ್ಸಿಮೀಟರ್‌ ಇಲ್ಲದಾಗ ರಕ್ತದಲ್ಲಿ ಆಮ್ಲಜನಕದ ಕೊರತೆಯನ್ನು ಹೇಗೆ ಗುರುತಿಸಬಹುದು? ಜೊತೆಗೆ ತೀರ ಸರಳ ಪ್ರಶ್ನೆಗಳಾದ (1) ಮನೆಯ ನಾಯಿಗೂ ಅಥವಾ ನಾಯಿಯ ಮೂಲಕವೂ ಕೊರೊನಾ ಬಂದೀತೆ? (2) ಲಸಿಕೆ ಹಾಕಿಸಿಕೊಂಡರೂ ಮುಖವಾಡ ಬೇಕೇಕೆ? (3) ಬೀದಿ ಬದಿಯಲ್ಲಿ ಕಲ್ಲಂಗಡಿ ತಿನ್ನಬಹುದೇ? (4) ಹಬೆಸ್ನಾನ ಎಂದರೇನು? ಇತ್ಯಾದಿಗಳಿಗೂ ಉತ್ತರ ಬೇಕಾಗಿದೆ. ಪತ್ರಿಕೆ
ಗಳಲ್ಲಿ, ಆಕಾಶವಾಣಿಯಲ್ಲಿ ಎಂದೋ ಉತ್ತರ ಬಂದಿರುತ್ತ ದಾದರೂ ಬೇಕೆಂದಾಗ ಸಿಗುವುದಿಲ್ಲ. ವಾಹಿನಿಗಳ ಚೀರಾಟದಲ್ಲಿ ಜನಕ್ಕೆ ಬೇಕಿದ್ದ ಮಾಹಿತಿಗಳು ಮಾತ್ರ ಸಿಗುವುದಿಲ್ಲ.

ದೂರದರ್ಶನದವರು ಈ ತುರ್ತುಸ್ಥಿತಿಯಲ್ಲಿ ತಮ್ಮ ಹಾಡು-ಕುಣಿತ, ಥಟ್ಟಂತಗಳನ್ನೆಲ್ಲ ಲಾಕ್‌ಡೌನ್‌ ಮಾಡಿ, ಸಹಾಯವಾಣಿ ತೆರೆದಿಟ್ಟು ಇಂಥ ನೂರಾರು ಸರಳ ಪ್ರಶ್ನೆಗಳನ್ನು ತಾವೇ ಕೇಳುತ್ತ, ಉತ್ತರ ಹೇಳುತ್ತ, ತಪ್ಪು ಕಲ್ಪನೆಯನ್ನು ನಿವಾರಿಸುತ್ತ (ಹೇಳಿದ್ದನ್ನೇ ಬೇಕಿದ್ದರೆ ಮತ್ತೆ ಮತ್ತೆ ಹೇಳುತ್ತ) ಹೋಗಬೇಕು. ಯಾವ ಹೊತ್ತಿನಲ್ಲಿ ಸ್ವಿಚಾನ್‌ ಮಾಡಿದರೂ ಒಂದಿಷ್ಟು ಮಾಹಿತಿ ಸಿಗುವ ವ್ಯವಸ್ಥೆ ಮಾಡಬೇಕು.

- ನಾಗೇಶ ಹೆಗಡೆ,ಕೆಂಗೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT