ಅಗತ್ಯ, ಅನಗತ್ಯ ಮಾಹಿತಿ ಪಡೆದೂ ಪಡೆದೂ ಮಕ್ಕಳು ಒತ್ತಡಕ್ಕೆ ಸಿಲುಕಿ, ತಾಳ್ಮೆಗೆಟ್ಟು ಅತಿ ಬೇಗ ಸಿಟ್ಟಿಗೇಳುತ್ತಾರೆ.
ಈ ಮಾಹಿತಿ ಜಗತ್ತು ಮಕ್ಕಳನ್ನು ಆತಂಕ ಹಾಗೂ ಗೊಂದಲಕ್ಕೆ ತಳ್ಳುತ್ತಿದೆ. ಇಂತಹ ಅತಿಯಾದ ಮಾಹಿತಿ ಪ್ರವಾಹದಿಂದ ಉಂಟಾಗುವ ಅಪಾಯವನ್ನು ಎದುರಿಸಲು ಮಕ್ಕಳನ್ನು ನಾವು ಸಜ್ಜುಗೊಳಿಸಬೇಕಾಗಿದೆ. ಈ ಕೆಲಸ ಪ್ರತಿಯೊಂದು ಮನೆಯಲ್ಲೂ ನಡೆಯಬೇಕು. ಪೋಷಕರು ಇದರ ಬಗ್ಗೆ ತುರ್ತಾಗಿ ಗಮನ ಹರಿಸುವುದು ಅತ್ಯಂತ ಅವಶ್ಯಕ.