ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಪ್ರವಾಹ ಎದುರಿಸಲು ಸಜ್ಜಾಗಬೇಕಿದೆ

ಅಕ್ಷರ ಗಾತ್ರ

‘ಮಾಹಿತಿ ಅಜೀರ್ಣಕ್ಕಿದೆ ಡಯಟ್’ ಎಂಬ ಡಾ. ಜ್ಯೋತಿ ಅವರ ಲೇಖನ (ಪ್ರ.ವಾ., ಜ. 9) ವಾಸ್ತವಿಕತೆಯಿಂದ ಕೂಡಿದೆ. ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಉಕ್ತಿ ಎಲ್ಲರಿಗೂ ತಿಳಿದಿರುವುದೇ. ಇಂದು ಎಲ್ಲ ವ್ಯವಹಾರವೂ ತಂತ್ರಜ್ಞಾನ ಆಧಾರಿತವಾಗಿದೆ. ಅಂತರ್ಜಾಲವು ನಮಗೆ ಇಂದು ಬೆರಳ ತುದಿಯಲ್ಲೇ ಎಲ್ಲಾ ಮಾಹಿತಿಯನ್ನು ಒದಗಿಸುತ್ತದೆ. ಆಬಾಲವೃದ್ಧರಾದಿಯಾಗಿ ಎಲ್ಲರೂ ಇಂದು ಗೂಗಲ್ಲನ್ನೇ ತಮ್ಮ ಗುರುವಾಗಿ ಸ್ವೀಕರಿಸಿ ತಮಗೆ ಬೇಕಾದ ಮಾಹಿತಿಯನ್ನು ಪಡೆಯುತ್ತಾರೆ. ಹೀಗೆ ಎಲ್ಲಿಯೂ ಬುದ್ಧಿಶಕ್ತಿ ಬಳಕೆಯಾಗದೆ ಯೋಚನಾಶಕ್ತಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಂತಾಗಿದೆ.

ಅಗತ್ಯ, ಅನಗತ್ಯ ಮಾಹಿತಿ ಪಡೆದೂ ಪಡೆದೂ ಮಕ್ಕಳು ಒತ್ತಡಕ್ಕೆ ಸಿಲುಕಿ, ತಾಳ್ಮೆಗೆಟ್ಟು ಅತಿ ಬೇಗ ಸಿಟ್ಟಿಗೇಳುತ್ತಾರೆ.
ಈ ಮಾಹಿತಿ ಜಗತ್ತು ಮಕ್ಕಳನ್ನು ಆತಂಕ ಹಾಗೂ ಗೊಂದಲಕ್ಕೆ ತಳ್ಳುತ್ತಿದೆ. ಇಂತಹ ಅತಿಯಾದ ಮಾಹಿತಿ ಪ್ರವಾಹದಿಂದ ಉಂಟಾಗುವ ಅಪಾಯವನ್ನು ಎದುರಿಸಲು ಮಕ್ಕಳನ್ನು ನಾವು ಸಜ್ಜುಗೊಳಿಸಬೇಕಾಗಿದೆ. ಈ ಕೆಲಸ ಪ್ರತಿಯೊಂದು ಮನೆಯಲ್ಲೂ ನಡೆಯಬೇಕು. ಪೋಷಕರು ಇದರ ಬಗ್ಗೆ ತುರ್ತಾಗಿ ಗಮನ ಹರಿಸುವುದು ಅತ್ಯಂತ ಅವಶ್ಯಕ.

– ವೀಣಾ ಸುಬ್ರಹ್ಮಣ್ಯ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT