ಒಂದು ರೂಪಾಯಿಯಲ್ಲಿ ಕೇವಲ 17 ಪೈಸೆ ತೆರಿಗೆ ಹಣ ಸದ್ವಿನಿಯೋಗವಾಗುತ್ತದೆ ಎಂದು 30 ವರ್ಷಗಳ ಹಿಂದೆಯೇ ರಾಜೀವ್ ಗಾಂಧಿ ಸ್ಪಷ್ಟ ಮಾತುಗಳಲ್ಲಿ ಭ್ರಷ್ಟತೆಯನ್ನು ವರ್ಣಿಸಿದ್ದರು. ಸಾವಿಲ್ಲದ ಮನೆಯಿಂದ ಸಾಸಿವೆ ತರುವುದು ಹೇಗೆ ಅಸಾಧ್ಯವೋ ಭ್ರಷ್ಟನಲ್ಲದ ರಾಜಕಾರಣಿಯನ್ನು ಪತ್ತೆ ಹಚ್ಚುವುದೂ ಕಷ್ಟ. ಯಾವ ಪಕ್ಷದ ಭೂತ, ವರ್ತಮಾನದ ಬಗ್ಗೆ ಚರ್ಚೆ ಬೇಡ, ಏನಿದ್ದರೂ ಇನ್ನು ಮುಂದೆ ನಾವು ಭ್ರಷ್ಟತೆಯನ್ನು ನಿರ್ಮೂಲ ಮಾಡುತ್ತೇವೆ ಎಂದು ಮತದಾರರಲ್ಲಿ ನಂಬಿಕೆ ಮೂಡಿಸಿ, ಆಚರಣೆಗೆ ತಂದರೆ ಅದೇ ಪ್ರಾಮಾಣಿಕ ತಂತ್ರಗಾರಿಕೆ.