‘ಸಿರಾ ಸೀಮೆ ಸಾಂಸ್ಕೃತಿಕ ವೇದಿಕೆ’ ವತಿಯಿಂದ ಪ್ರತಿವರ್ಷ ಕಾಡುಗೊಲ್ಲರ ಸಾಂಸ್ಕೃತಿಕ ವೀರ ಜುಂಜಪ್ಪನ ಮೂಲ ನೆಲೆಯಾದ ಶಿರಾ ತಾಲ್ಲೂಕಿನ ಜುಂಜಪ್ಪನ ಗುಡ್ಡೆಯಲ್ಲಿ ಹಮ್ಮಿಕೊಳ್ಳುವ ಅಹೋರಾತ್ರಿ ಶಿವೋತ್ಸವ ಕಾರ್ಯಕ್ರಮ ಶ್ಲಾಘನೀಯ. ಆದರೆ ಜುಂಜಪ್ಪ ಒಬ್ಬ ಸಾಂಸ್ಕೃತಿಕ ವೀರ, ಭೂಸುಧಾರಣಾ ಹರಿಕಾರ, ಊಳಿಗಮಾನ್ಯದ ವಿರೋಧಿ, ಮಾನವ ಬದುಕಿಗಿಂತ ಪಶುಗಳ ಬದುಕೇ ಮುಖ್ಯ ಎಂದು ತಿಳಿದು, ಅರಣ್ಯವನ್ನು ಪೋಷಿಸಲು ಜೀವನದಾದ್ಯಂತ ದುಡಿದು ಮಡಿದವನು. ಇಂತಹ ಸಮಾನತೆಯ ಹರಿಕಾರ ಜುಂಜಪ್ಪನ ಆಶಯಗಳನ್ನು ಅಧುನಿಕತೆಗೆ ಹೇಗೆ ಬಳಸಿಕೊಳ್ಳಬೇಕು ಎಂಬುದಕ್ಕೆ ಈ ಕಾರ್ಯಕ್ರಮದಲ್ಲಿ ಹೆಚ್ಚು ಆದ್ಯತೆ ನೀಡುವುದು ಒಳಿತು.