ಸಾಹಿತ್ಯ ಕೃತಿಗಳ ಗ್ರಂಥಾಲಯವಿಲ್ಲ, ‘ಮಲ್ಟಿ ಜಿಮ್’ ಸಾಧನಗಳಿಂದಾಗಿ ಒಂದು ಕಟ್ಟಡ ವ್ಯರ್ಥವಾಗಿದೆ. ಶಿವರಾಮ ಕಾರಂತರು 40 ವರ್ಷ ನೆಲೆಸಿದ್ದ ‘ಬಾಲವನ’ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿರುವುದಕ್ಕೆ ಸಾಹಿತ್ಯಾಸಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಸ್ಪಷ್ಟ ನೀತಿ ಇಲ್ಲದಿರುವುದು ಹಾಗೂ ಯೋಜನೆಗಳ ಜಾರಿಗೆ ಸಮಿತಿ ಇಲ್ಲದಿರುವುದರಿಂದ ರಾಜ್ಯ ಸರ್ಕಾರದಿಂದ ₹ 1 ಕೋಟಿ ಅನುದಾನ ದೊರಕಿದ್ದರೂ ಕೆಲಸಗಳು ಆಮೆಗತಿಯಲ್ಲಿ ನಡೆಯುತ್ತಿವೆ. ಸಾರ್ವಜನಿಕರನ್ನು ಸೆಳೆಯುವ ಅರ್ಥಪೂರ್ಣ ಕಾರ್ಯಕ್ರಮಗಳು ಜರುಗುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಸಕ್ತಿ ತೋರಿಸೀತೇ?