ನಗರದ ಐದು ಸ್ಮಶಾನಗಳಲ್ಲಿ ಮೆಶ್ ಕಾಂಪೋಸ್ಟ್ ಘಟಕಗಳ ಅಳವಡಿಕೆ ಹಾಗೂ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿರುವುದು ಸ್ವಾಗತಾರ್ಹ (ಪ್ರ.ವಾ., ಜುಲೈ 3). ಕೈವಲ್ಯಧಾಮದಲ್ಲಿ ಶೇಖರಣೆಗೊಳ್ಳುವ ಹೂವಿನ ಹಾರ, ತೆಂಗಿನ ಗರಿ ಹಾಗೂ ಬಿದಿರನ್ನು ಒಂದೆಡೆ ಹಾಕುವುದರಿಂದ ಗೊಬ್ಬರ ತಯಾರಿಸಬಹುದು ಹಾಗೂ ಆ ಗೊಬ್ಬರ ಬಳಸಿಕೊಂಡು ಅದೇ ಪರಿಸರದಲ್ಲಿ ಹಸಿರು ಉಕ್ಕುವಂತೆ ಮಾಡಬಹುದಲ್ಲವೇ?