ಕೋವಿಡ್ನಂತಹ ದುರಿತ ಕಾಲದಲ್ಲಿಯೂ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಕಾವ್ಯ-ಕಮ್ಮಟ, ಹಳೆಗನ್ನಡ ಓದು, ಕಥಾ ಕಮ್ಮಟ, ವಿಜ್ಞಾನ ಕಮ್ಮಟ, ಅಡಿಗರ ಜನ್ಮಶತಮಾನೋತ್ಸವ ವಿಚಾರ ಸಂಕಿರಣ... ಹೀಗೆ ಹತ್ತಾರು ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ನಾಡಿನ ಯುವ ಬರಹಗಾರರನ್ನು ಮತ್ತಷ್ಟು ಕ್ರಿಯಾಶೀಲರಾಗಿರುವಂತೆ ಮಾಡಿದೆ. ಆದರೆ, ಮೌಢ್ಯಗಳು, ಕಂದಾಚಾರಗಳು, ಕುಲದ ತಾರತಮ್ಯದ ಕುರಿತಂತೆ ಸಾತ್ವಿಕ ಪ್ರತಿರೋಧ ಒಡ್ಡಿದ ಕನಕದಾಸರ ಅಧ್ಯಯನ ಕೇಂದ್ರದಿಂದ ಕಾರ್ಯಕ್ರಮಗಳು ನಡೆಯದಿರುವುದು ಬರಹಗಾರರು ಮತ್ತು ಓದುಗರಿಗೆ ನೋವನ್ನು ತಂದಿದೆ.