<p>‘ಇಂದಿನ ಚಿತ್ರಗೀತೆಗಳಲ್ಲಿ ಅರುಚಿಯೇ ಅಭಿರುಚಿಯಾದಂತಿದೆ’ ಎಂಬ ಡಾ. ದೊಡ್ಡರಂಗೇಗೌಡ ಅವರ ಅಭಿಪ್ರಾಯಕ್ಕೆ (ಸಂಗತ, ಮೇ 28) ‘ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗಗಳೆಲ್ಲ ಅರುಚಿ ಅಲ್ಲ’ ಎಂದು ಸುಗ್ಗನಹಳ್ಳಿ ಷಡಕ್ಷರಿ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಜೂನ್ 10). ಈ ಅಭಿಪ್ರಾಯವನ್ನು ನಾನು ನಿರಾಕರಿಸುತ್ತೇನೆ. ಅಲ್ಲದೆ, ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗ ಬೇಡ ಎಂದು ದೊಡ್ಡರಂಗೇಗೌಡ ಅವರು ಹೇಳಿಲ್ಲ. ಬದಲಾಗಿ, ಇವತ್ತಿನ ಚಿತ್ರಗೀತೆಗಳಲ್ಲಿ ಮೌಲ್ಯಗಳಿಲ್ಲ ಎಂದಿದ್ದಾರೆ.</p>.<p>ಸಮಾಜಕ್ಕೆ ಸಂದೇಶವಾಹಿನಿ ಆಗುವ ಚಿತ್ರಗೀತೆಗಳಲ್ಲಿ ಈಗ ಕೀಳು ಅಭಿರುಚಿಗಳು ಹೆಚ್ಚು ಧ್ವನಿಸುತ್ತಿವೆ. ಅಪರೂಪವಾಗಿ ಯಾವುದೋ ಒಂದು ಒಳ್ಳೆಯಗೀತೆ ಸಿಕ್ಕ ಮಾತ್ರಕ್ಕೆ ಈಗಿನ ಎಲ್ಲ ಹಾಡುಗಳನ್ನೂ ಒಪ್ಪಿಕೊಳ್ಳಲು ಸಾಧ್ಯವೇ? ಸಾಕಷ್ಟು ಗದ್ಯಮಯವಾದ, ಪ್ರಾಸಕ್ಕಾಗಿ ಅಪಭ್ರಂಶ ತರುವ, ಸತ್ವ ಇಲ್ಲದೆ ಬರೀ ಟೊಳ್ಳಾಗಿ ಕಾಣಿಸುವ ಗೀತೆಗಳು ಹಿಂದಿನ ಮೌಲಿಕ ಗೀತೆಗಳಿಗೆ ಸಮವೇ? ಚಿತ್ರರಂಗದ ಹೊಸಬರಿಂದಲೂ ತಮ್ಮ ಸೃಜನಶೀಲತೆ, ಕ್ರಿಯಾಶೀಲತೆಯಿಂದ ಸಮಾಜಕ್ಕೆ ಒಳ್ಳೆಯದನ್ನು ಕೊಡಲು ಸಾಧ್ಯವಿದೆ ಅಲ್ಲವೇ?</p>.<p><em><strong>–ಡಾ. ಡಿ.ಭರತ್, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಇಂದಿನ ಚಿತ್ರಗೀತೆಗಳಲ್ಲಿ ಅರುಚಿಯೇ ಅಭಿರುಚಿಯಾದಂತಿದೆ’ ಎಂಬ ಡಾ. ದೊಡ್ಡರಂಗೇಗೌಡ ಅವರ ಅಭಿಪ್ರಾಯಕ್ಕೆ (ಸಂಗತ, ಮೇ 28) ‘ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗಗಳೆಲ್ಲ ಅರುಚಿ ಅಲ್ಲ’ ಎಂದು ಸುಗ್ಗನಹಳ್ಳಿ ಷಡಕ್ಷರಿ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ಜೂನ್ 10). ಈ ಅಭಿಪ್ರಾಯವನ್ನು ನಾನು ನಿರಾಕರಿಸುತ್ತೇನೆ. ಅಲ್ಲದೆ, ಚಿತ್ರಗೀತೆಗಳಲ್ಲಿ ಹೊಸ ಪ್ರಯೋಗ ಬೇಡ ಎಂದು ದೊಡ್ಡರಂಗೇಗೌಡ ಅವರು ಹೇಳಿಲ್ಲ. ಬದಲಾಗಿ, ಇವತ್ತಿನ ಚಿತ್ರಗೀತೆಗಳಲ್ಲಿ ಮೌಲ್ಯಗಳಿಲ್ಲ ಎಂದಿದ್ದಾರೆ.</p>.<p>ಸಮಾಜಕ್ಕೆ ಸಂದೇಶವಾಹಿನಿ ಆಗುವ ಚಿತ್ರಗೀತೆಗಳಲ್ಲಿ ಈಗ ಕೀಳು ಅಭಿರುಚಿಗಳು ಹೆಚ್ಚು ಧ್ವನಿಸುತ್ತಿವೆ. ಅಪರೂಪವಾಗಿ ಯಾವುದೋ ಒಂದು ಒಳ್ಳೆಯಗೀತೆ ಸಿಕ್ಕ ಮಾತ್ರಕ್ಕೆ ಈಗಿನ ಎಲ್ಲ ಹಾಡುಗಳನ್ನೂ ಒಪ್ಪಿಕೊಳ್ಳಲು ಸಾಧ್ಯವೇ? ಸಾಕಷ್ಟು ಗದ್ಯಮಯವಾದ, ಪ್ರಾಸಕ್ಕಾಗಿ ಅಪಭ್ರಂಶ ತರುವ, ಸತ್ವ ಇಲ್ಲದೆ ಬರೀ ಟೊಳ್ಳಾಗಿ ಕಾಣಿಸುವ ಗೀತೆಗಳು ಹಿಂದಿನ ಮೌಲಿಕ ಗೀತೆಗಳಿಗೆ ಸಮವೇ? ಚಿತ್ರರಂಗದ ಹೊಸಬರಿಂದಲೂ ತಮ್ಮ ಸೃಜನಶೀಲತೆ, ಕ್ರಿಯಾಶೀಲತೆಯಿಂದ ಸಮಾಜಕ್ಕೆ ಒಳ್ಳೆಯದನ್ನು ಕೊಡಲು ಸಾಧ್ಯವಿದೆ ಅಲ್ಲವೇ?</p>.<p><em><strong>–ಡಾ. ಡಿ.ಭರತ್, ಬೆಂಗಳೂರು</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>