ಕಿ.ರಂ. ನೆನಪಲ್ಲಿ ‘ಕವಿಪುಂಗವರು ಪ್ರತಿವರ್ಷ ಒಂದೆಡೆ ಸೇರುತ್ತಾರೆ’ ಎಂಬ ಮಾತು ವ್ಯಂಗ್ಯದಿಂದ ಕೂಡಿದೆ.ಕಿ.ರಂ. ಈ ನಾಡಿನ ಸಾವಿರಾರು ವಿದ್ಯಾರ್ಥಿಗಳಿಗೆ ಗುರುವಲ್ಲದ ಗುರು. ಅವರ ಕಾವ್ಯದ ಅದಮ್ಯ ಪ್ರೀತಿಗೆ, ವಿಶ್ಲೇಷಣೆಗೆ ತಲೆದೂಗದವರೇ ಇಲ್ಲ. ಈಚಿನ ವರ್ಷಗಳಲ್ಲಿ ಭರವಸೆಯ ಕಾವ್ಯ ಟಿಸಿಲೊಡೆಯಲು ಕಿ.ರಂ. ಅವರ ಕೊಡುಗೆಯೂ ಅಪಾರ. ಅಂಥ ಹುಚ್ಚಿನ ಕೆಲವು ಕವಿಗಳು, ಸಾಹಿತ್ಯಾಸಕ್ತರು ಒಂದೆಡೆ ಸೇರಿ ಕಾವ್ಯದ ಓದು, ಚರ್ಚೆ ಮಾಡುತ್ತಿದ್ದಾರೆ. ಹಿಂದೆ ಅವರ ನೆನಪಲ್ಲಿ ಅಹೋರಾತ್ರಿ ಹಲವು ಕಾರ್ಯಕ್ರಮ ನಡೆಯುತ್ತಿದ್ದವು. ಅಲ್ಲೆಲ್ಲೂ ಅವರ ಫೋಟೊ, ಹಾರ, ತುರಾಯಿ, ಊದುಬತ್ತಿ ಇರುತ್ತಿರಲಿಲ್ಲ.