ಬೆಳಗಾವಿಯಲ್ಲಿ ಇದೇ 13ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಿದ್ದರೂ ಜನಸಾಮಾನ್ಯರ ಬವಣೆಗಳು, ಉತ್ತರ ಕರ್ನಾಟಕದ ಹಲವು ಜ್ವಲಂತ ಸಮಸ್ಯೆಗಳ ಕುರಿತು ಅರ್ಥಪೂರ್ಣ ಚರ್ಚೆಗಳೇ ನಡೆದಿಲ್ಲ. ಸಮಸ್ಯೆಯ ಎಲ್ಲ ಆಯಾಮಗಳ ಕುರಿತು ವಿವರವಾಗಿ ಚರ್ಚಿಸಲು ಸದನ ಅತ್ಯುತ್ತಮ ವೇದಿಕೆ. ಇದನ್ನು ಮರೆತು ಆಡಳಿತ ಮತ್ತು ವಿರೋಧ ಪಕ್ಷಗಳ ಕಡೆಯವರು ಬರೀ ಬೊಬ್ಬೆ, ಗದ್ದಲ, ಚೀರಾಟಗಳಲ್ಲಿ ಮೈಮರೆತರೆ ನಮ್ಮ ತೆರಿಗೆ ಹಣಕ್ಕೆ ನ್ಯಾಯ ದೊರೆಯುವುದಾದರೂ ಹೇಗೆ? ಅಧಿವೇಶನದ ಇನ್ನುಳಿದ ದಿನಗಳನ್ನಾದರೂ ಸದುಪಯೋಗಪಡಿಸಿಕೊಳ್ಳಬೇಕು. ಎರಡೂ ಕಡೆಯವರು ತಮ್ಮ ಪ್ರತಿಷ್ಠೆಯನ್ನು ಒತ್ತಟ್ಟಿಗಿರಿಸಿ, ಹಲವು ಸಮಸ್ಯೆಗಳಿಂದ ಬಳಲಿರುವ ಪ್ರಜೆಗಳಿಗೆ ಪರಿಹಾರ ಒದಗಿಸಬಲ್ಲರೇ?