ತಮ್ಮನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಸಚಿವ ಸೋಮಣ್ಣನವರು ಸಿದ್ದರಾಮಯ್ಯನವರ ಬೇನಾಮಿ ಆಸ್ತಿ ಹಾಗೂ ‘ರೀ ಡೂ’ ವ್ಯವಹಾರಗಳ ಬಗೆಗೆ ಪ್ರತ್ಯಾರೋಪ ಮಾಡಿದ್ದಾರೆ (ಪ್ರ.ವಾ., ಆ. 29). ಗೊತ್ತಿದೆ, ಕಾಲ ಬಂದಾಗ ಬಿಚ್ಚು ತ್ತೇನೆ- ಎನ್ನುವುದು ಸಮಯಸಾಧಕತನ. ಚುನಾವಣಾ ಪ್ರಚಾರ ಆರಂಭವಾದಾಗ ಸಕಾಲವೇ ಸ್ವಾಮಿ? ಮೈಸೂರಿನ, ಬಾದಾಮಿಯ ಹಾಗೂ ಸಿದ್ದರಾಮಯ್ಯನವರು ಸ್ಪರ್ಧಿಸಲಿರುವ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಇದು ಆಸಕ್ತಿಯ ವಿಷಯ. ಈಗಲೇ ಬಹಿರಂಗಪಡಿಸಬಾರದೇಕೆ? ಬೇನಾಮಿ ಆಸ್ತಿಗಳ ಬಗೆಗೆ ಪೂರ್ವಾನ್ವಯ ಕ್ರಮ ಕೈಗೊಳ್ಳಲಾಗದು ಎಂಬ ನ್ಯಾಯಾಲಯದ ಇತ್ತೀಚಿನ ತೀರ್ಪು ಇಬ್ಬರಿಗೂ ಗೊತ್ತಿರುತ್ತದೆ.