ಪಶ್ಚಿಮಘಟ್ಟದಲ್ಲಿ ಅತಿಯಾದ ಮಾನವ ಹಸ್ತಕ್ಷೇಪದಿಂದ ಕರ್ನಾಟಕ, ಕೇರಳ ಭೂಪ್ರದೇಶದಲ್ಲಿ ಜೋರು ಮಳೆಗೆ ಭೂಕುಸಿತ ಸಂಭವಿಸುತ್ತಿದೆ. ಮುಖ್ಯವಾಗಿ ಅರಣ್ಯನಾಶ, ಗಣಿಗಾರಿಕೆ, ಬೃಹತ್ ಕೈಗಾರಿಕೆಗಳು, ರೆಸಾರ್ಟ್ಗಳು, ಹೋಮ್ಸ್ಟೇಗಳು, ಕಾಫಿ, ಟೀ ಪ್ಲಾಂಟೇಷನ್ಗಳು, ಅಡಿಕೆ ತೋಟಗಳು ಮುಂತಾದವುಗಳಿಂದ ಹಿಡಿತ ಕಳೆದುಕೊಂಡ ಬೆಟ್ಟಗುಡ್ಡಗಳು ಎಲ್ಲೆಂದರಲ್ಲಿ ಕುಸಿಯತೊಡಗಿದ್ದು, ಎರಡು ವರ್ಷಗಳಿಂದ ಇದರ ತೀವ್ರ ಅನುಭವ ಆಗುತ್ತಿದೆ.