<p>ಸಾರಿಗೆ ನೌಕರರು ಮುಷ್ಕರನಿರತರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ. ಜನರ ಪಡಿಪಾಟಲು ತಪ್ಪಿಸಲು ಇದು ಅಗತ್ಯವಾದರೂ ಸೌಹಾರ್ದ ವಾತಾವರಣದಲ್ಲಿ ಸಮಸ್ಯೆ ಬಗೆಹರಿಸುವುದು ಆದ್ಯತೆಯಾಗಲಿ. ಕಳೆದ ಡಿಸೆಂಬರ್ನಲ್ಲಿ ನೀಡಿದ್ದ ಭರವಸೆಗಳು ಈಡೇರದೇ ಹೋಗಿದ್ದರಿಂದ ಮುಷ್ಕರದ ಅನಿವಾರ್ಯ ಎದುರಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಇದೇನೇ ಇರಲಿ, ಸರ್ಕಾರ ಮತ್ತು ನೌಕರರ ಹಗ್ಗ ಜಗ್ಗಾಟದಲ್ಲಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.</p>.<p>ಸರ್ಕಾರ ಜನರಿಗೆ ತೊಂದರೆಯಾಗದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಖಾಸಗಿ ಬಸ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಸಾರಿಗೆ ನೌಕರರು ಸಹ ಪರಿಸ್ಥಿತಿಯ ತೀವ್ರತೆ ಅರಿತು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿಭಟನೆಗೆ ಬೇರೆ ಬೇರೆ ಮಾರ್ಗಗಳಿವೆ. ಬಸ್ ಸಂಚಾರ ನಿಲ್ಲಿಸುವುದರಿಂದ ಸರ್ಕಾರಕ್ಕಿಂತ ಜನರಿಗೆ ಹೊರೆಯಾಗುವ ಬಗ್ಗೆ ನೌಕರರು ಪರಾಮರ್ಶೆ ಮಾಡಬೇಕು.</p>.<p><em><strong>-ವಿಜಯಕುಮಾರ್ ಎಚ್.ಕೆ.,<span class="Designate"> ರಾಯಚೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸಾರಿಗೆ ನೌಕರರು ಮುಷ್ಕರನಿರತರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ. ಜನರ ಪಡಿಪಾಟಲು ತಪ್ಪಿಸಲು ಇದು ಅಗತ್ಯವಾದರೂ ಸೌಹಾರ್ದ ವಾತಾವರಣದಲ್ಲಿ ಸಮಸ್ಯೆ ಬಗೆಹರಿಸುವುದು ಆದ್ಯತೆಯಾಗಲಿ. ಕಳೆದ ಡಿಸೆಂಬರ್ನಲ್ಲಿ ನೀಡಿದ್ದ ಭರವಸೆಗಳು ಈಡೇರದೇ ಹೋಗಿದ್ದರಿಂದ ಮುಷ್ಕರದ ಅನಿವಾರ್ಯ ಎದುರಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಇದೇನೇ ಇರಲಿ, ಸರ್ಕಾರ ಮತ್ತು ನೌಕರರ ಹಗ್ಗ ಜಗ್ಗಾಟದಲ್ಲಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.</p>.<p>ಸರ್ಕಾರ ಜನರಿಗೆ ತೊಂದರೆಯಾಗದಂತೆ ರಾಜ್ಯದ ಎಲ್ಲ ಕಡೆಗಳಲ್ಲಿಯೂ ಖಾಸಗಿ ಬಸ್ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ. ಸಾರಿಗೆ ನೌಕರರು ಸಹ ಪರಿಸ್ಥಿತಿಯ ತೀವ್ರತೆ ಅರಿತು ಮಾತುಕತೆ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ. ಪ್ರತಿಭಟನೆಗೆ ಬೇರೆ ಬೇರೆ ಮಾರ್ಗಗಳಿವೆ. ಬಸ್ ಸಂಚಾರ ನಿಲ್ಲಿಸುವುದರಿಂದ ಸರ್ಕಾರಕ್ಕಿಂತ ಜನರಿಗೆ ಹೊರೆಯಾಗುವ ಬಗ್ಗೆ ನೌಕರರು ಪರಾಮರ್ಶೆ ಮಾಡಬೇಕು.</p>.<p><em><strong>-ವಿಜಯಕುಮಾರ್ ಎಚ್.ಕೆ.,<span class="Designate"> ರಾಯಚೂರು</span></strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>