ಸಾರಿಗೆ ನೌಕರರು ಮುಷ್ಕರನಿರತರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಪರ್ಯಾಯ ಕ್ರಮಕ್ಕೆ ಮುಂದಾಗುವ ಎಚ್ಚರಿಕೆ ನೀಡಿದೆ. ಜನರ ಪಡಿಪಾಟಲು ತಪ್ಪಿಸಲು ಇದು ಅಗತ್ಯವಾದರೂ ಸೌಹಾರ್ದ ವಾತಾವರಣದಲ್ಲಿ ಸಮಸ್ಯೆ ಬಗೆಹರಿಸುವುದು ಆದ್ಯತೆಯಾಗಲಿ. ಕಳೆದ ಡಿಸೆಂಬರ್ನಲ್ಲಿ ನೀಡಿದ್ದ ಭರವಸೆಗಳು ಈಡೇರದೇ ಹೋಗಿದ್ದರಿಂದ ಮುಷ್ಕರದ ಅನಿವಾರ್ಯ ಎದುರಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಇದೇನೇ ಇರಲಿ, ಸರ್ಕಾರ ಮತ್ತು ನೌಕರರ ಹಗ್ಗ ಜಗ್ಗಾಟದಲ್ಲಿ ಸಾರ್ವಜನಿಕರು ತೊಂದರೆ ಎದುರಿಸುವಂತಾಗಿದೆ.