ಕರುನಾಡು ಬರದಿಂದ ತತ್ತರಿಸಿರುವಾಗ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಚಿನ್ನದ ರಥ ಮಾಡಿಸುವ ಅವಶ್ಯಕತೆ ಇದೆಯೇ? ದೇವಸ್ಥಾನಕ್ಕೆ ಭಕ್ತರಿಂದ ಬಂದ ದೇಣಿಗೆಯನ್ನು ಜನರಿಗಾಗಿಯೇ ವೆಚ್ಚ ಮಾಡುವ ಒಳ್ಳೆಯ ಕೆಲಸಗಳು ಏಕೆ ನಡೆಯಬಾರದು? ಕಡುಬಡತನದಿಂದ ಹಸಿವು, ಶಿಕ್ಷಣದಿಂದ ವಂಚಿತರಾಗುತ್ತಿರುವ ಎಷ್ಟೊಂದು ಮಕ್ಕಳಿದ್ದಾರೆ. ಅಂಥವರ ಏಳ್ಗೆಗಾಗಿ ಈ ದೇವಸ್ಥಾನದ ಹಣವನ್ನು ಉಪಯೋಗಿಸಬಹುದು ಅಲ್ಲವೇ?