<p>ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿ ನಿರಂಜನಾರಾಧ್ಯ ವಿ.ಪಿ. ಅವರು ಬರೆದಿರುವ (ಸಂಗತ, ಫೆ. 7) ವಿಚಾರಕ್ಕೆ ಪೂರಕವಾಗಿ ಕೆಲ ವಿಷಯಗಳನ್ನು<br />ಸೇರಿಸಬಯಸುತ್ತೇನೆ. ಶಿಕ್ಷಣ ವ್ಯವಸ್ಥೆಯ ಪ್ರತೀ ಹಂತವೂ ಕಡ್ಡಾಯವಾಗಿ ಮಗುಕೇಂದ್ರಿತವಾಗಿಯೇ ರೂಪಿತವಾಗಬೇಕು. ಆದರೆ ಇದುವರೆಗೆ ಮಗುವಿಗೆ ಅಸಮಾನತೆಯು ಪೂರ್ವಪ್ರಾಥಮಿಕ ಶಿಕ್ಷಣದ ಹಂತದಲ್ಲೇ<br />ಪ್ರಾರಂಭವಾಗುವಂತೆ ಮಾಡಿರುವುದು, ಪ್ರಭುತ್ವವು ವ್ಯವಸ್ಥಿತವಾಗಿ ಮಕ್ಕಳಿಗೆ ಮಾಡುತ್ತಿರುವ ದ್ರೋಹ! ಇದಕ್ಕೆ ಬಲಿಪಶು ಆಗಿರುವವರು ನಮ್ಮ ಹಳ್ಳಿಗಾಡಿನ ಬಡಮಕ್ಕಳು. ಹೀಗಾಗಿ ಈ ದೋಷವನ್ನು ಈಗಲಾದರೂ ಸರಿಪಡಿಸಲು ಪೂರ್ವಪ್ರಾಥಮಿಕ ಹಂತದ ಇಡೀ ಮಕ್ಕಳ ಈ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವ<br />ರಿಂದ ಬಿಡಿಸಿ ಸರ್ಕಾರ ತಾನೇ ಸಂಪೂರ್ಣವಾಗಿ ವಹಿಸಿಕೊಂಡು ಕಡ್ಡಾಯ, ಉಚಿತ ಮತ್ತು ಸಮಾನ ಶಿಕ್ಷಣವು ಪ್ರತಿ ಮಗುವಿಗೂ ಈ ಹಂತದಲ್ಲಾದರೂ ಖಾತರಿಯಾಗುವಂತೆ ಮಾಡಬೇಕು. ಭಾಷಾ ಮಾಧ್ಯಮವೂ ಈ ಹಂತದಲ್ಲೇ ಎಲ್ಲ ಮಗುವಿಗೂ ಸಮಾನವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಬೇಕು.</p>.<p>ಮಿಕ್ಕೆಲ್ಲ ವಿಷಯಗಳು ಈ ಮಗುಕೇಂದ್ರಿತ ಶಿಕ್ಷಣದ ಆಚೆಯ ಪರಿಧಿಯಲ್ಲಿ ಬರುವುದರಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸಬೇಕೇ ಹೊರತು, ಈಗಾಗಲೇ ತಳಹಂತದ ಮೂಲ ಶಿಕ್ಷಣದಲ್ಲಿ ವ್ಯಾಪಕವಾಗಿ<br />ರುವ ಅಸಮಾನ ವ್ಯವಸ್ಥೆಯನ್ನು ಇನ್ನಷ್ಟು ಅಸಮಾನಗೊಳಿಸಿ, ಮಗುವಿನ ಶೈಕ್ಷಣಿಕ ಮೂಲಭೂತ ಹಕ್ಕಿಗೆ<br />ಘಾತ ಉಂಟು ಮಾಡಬಾರದು. ಈ ವಿಚಾರದ ಹಿಂದಿರುವ ಎಲ್ಲ ಸೂಕ್ಷ್ಮ ಆಯಾಮಗಳನ್ನೂ ಪ್ರಾಜ್ಞರು ಚಿಂತಿಸಿ, ಅಂಚಿಗೆ ಒತ್ತರಿಸಲ್ಪಟ್ಟ ಬಡಮಕ್ಕಳು ಇನ್ನಾದರೂ ಮುಖ್ಯವಾಹಿನಿಯ ಸಮಾನ ಶಿಕ್ಷಣದ ಹಕ್ಕನ್ನು ಪಡೆಯುವೆಡೆಗೇ ನಮ್ಮ ಗಮನ ಕೇಂದ್ರೀಕರಿಸಬೇಕು.</p>.<p><strong>ರೂಪ,ಹಾಸನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿ ನಿರಂಜನಾರಾಧ್ಯ ವಿ.ಪಿ. ಅವರು ಬರೆದಿರುವ (ಸಂಗತ, ಫೆ. 7) ವಿಚಾರಕ್ಕೆ ಪೂರಕವಾಗಿ ಕೆಲ ವಿಷಯಗಳನ್ನು<br />ಸೇರಿಸಬಯಸುತ್ತೇನೆ. ಶಿಕ್ಷಣ ವ್ಯವಸ್ಥೆಯ ಪ್ರತೀ ಹಂತವೂ ಕಡ್ಡಾಯವಾಗಿ ಮಗುಕೇಂದ್ರಿತವಾಗಿಯೇ ರೂಪಿತವಾಗಬೇಕು. ಆದರೆ ಇದುವರೆಗೆ ಮಗುವಿಗೆ ಅಸಮಾನತೆಯು ಪೂರ್ವಪ್ರಾಥಮಿಕ ಶಿಕ್ಷಣದ ಹಂತದಲ್ಲೇ<br />ಪ್ರಾರಂಭವಾಗುವಂತೆ ಮಾಡಿರುವುದು, ಪ್ರಭುತ್ವವು ವ್ಯವಸ್ಥಿತವಾಗಿ ಮಕ್ಕಳಿಗೆ ಮಾಡುತ್ತಿರುವ ದ್ರೋಹ! ಇದಕ್ಕೆ ಬಲಿಪಶು ಆಗಿರುವವರು ನಮ್ಮ ಹಳ್ಳಿಗಾಡಿನ ಬಡಮಕ್ಕಳು. ಹೀಗಾಗಿ ಈ ದೋಷವನ್ನು ಈಗಲಾದರೂ ಸರಿಪಡಿಸಲು ಪೂರ್ವಪ್ರಾಥಮಿಕ ಹಂತದ ಇಡೀ ಮಕ್ಕಳ ಈ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವ<br />ರಿಂದ ಬಿಡಿಸಿ ಸರ್ಕಾರ ತಾನೇ ಸಂಪೂರ್ಣವಾಗಿ ವಹಿಸಿಕೊಂಡು ಕಡ್ಡಾಯ, ಉಚಿತ ಮತ್ತು ಸಮಾನ ಶಿಕ್ಷಣವು ಪ್ರತಿ ಮಗುವಿಗೂ ಈ ಹಂತದಲ್ಲಾದರೂ ಖಾತರಿಯಾಗುವಂತೆ ಮಾಡಬೇಕು. ಭಾಷಾ ಮಾಧ್ಯಮವೂ ಈ ಹಂತದಲ್ಲೇ ಎಲ್ಲ ಮಗುವಿಗೂ ಸಮಾನವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಬೇಕು.</p>.<p>ಮಿಕ್ಕೆಲ್ಲ ವಿಷಯಗಳು ಈ ಮಗುಕೇಂದ್ರಿತ ಶಿಕ್ಷಣದ ಆಚೆಯ ಪರಿಧಿಯಲ್ಲಿ ಬರುವುದರಿಂದ ಅದಕ್ಕೆ ತಕ್ಕಂತೆ ವ್ಯವಸ್ಥೆ ರೂಪಿಸಬೇಕೇ ಹೊರತು, ಈಗಾಗಲೇ ತಳಹಂತದ ಮೂಲ ಶಿಕ್ಷಣದಲ್ಲಿ ವ್ಯಾಪಕವಾಗಿ<br />ರುವ ಅಸಮಾನ ವ್ಯವಸ್ಥೆಯನ್ನು ಇನ್ನಷ್ಟು ಅಸಮಾನಗೊಳಿಸಿ, ಮಗುವಿನ ಶೈಕ್ಷಣಿಕ ಮೂಲಭೂತ ಹಕ್ಕಿಗೆ<br />ಘಾತ ಉಂಟು ಮಾಡಬಾರದು. ಈ ವಿಚಾರದ ಹಿಂದಿರುವ ಎಲ್ಲ ಸೂಕ್ಷ್ಮ ಆಯಾಮಗಳನ್ನೂ ಪ್ರಾಜ್ಞರು ಚಿಂತಿಸಿ, ಅಂಚಿಗೆ ಒತ್ತರಿಸಲ್ಪಟ್ಟ ಬಡಮಕ್ಕಳು ಇನ್ನಾದರೂ ಮುಖ್ಯವಾಹಿನಿಯ ಸಮಾನ ಶಿಕ್ಷಣದ ಹಕ್ಕನ್ನು ಪಡೆಯುವೆಡೆಗೇ ನಮ್ಮ ಗಮನ ಕೇಂದ್ರೀಕರಿಸಬೇಕು.</p>.<p><strong>ರೂಪ,ಹಾಸನ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>