ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪೂರ್ವಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ವಿಷಯಕ್ಕೆ ಸಂಬಂಧಿಸಿ ನಿರಂಜನಾರಾಧ್ಯ ವಿ.ಪಿ. ಅವರು ಬರೆದಿರುವ (ಸಂಗತ, ಫೆ. 7) ವಿಚಾರಕ್ಕೆ ಪೂರಕವಾಗಿ ಕೆಲ ವಿಷಯಗಳನ್ನು
ಸೇರಿಸಬಯಸುತ್ತೇನೆ. ಶಿಕ್ಷಣ ವ್ಯವಸ್ಥೆಯ ಪ್ರತೀ ಹಂತವೂ ಕಡ್ಡಾಯವಾಗಿ ಮಗುಕೇಂದ್ರಿತವಾಗಿಯೇ ರೂಪಿತವಾಗಬೇಕು. ಆದರೆ ಇದುವರೆಗೆ ಮಗುವಿಗೆ ಅಸಮಾನತೆಯು ಪೂರ್ವಪ್ರಾಥಮಿಕ ಶಿಕ್ಷಣದ ಹಂತದಲ್ಲೇ
ಪ್ರಾರಂಭವಾಗುವಂತೆ ಮಾಡಿರುವುದು, ಪ್ರಭುತ್ವವು ವ್ಯವಸ್ಥಿತವಾಗಿ ಮಕ್ಕಳಿಗೆ ಮಾಡುತ್ತಿರುವ ದ್ರೋಹ! ಇದಕ್ಕೆ ಬಲಿಪಶು ಆಗಿರುವವರು ನಮ್ಮ ಹಳ್ಳಿಗಾಡಿನ ಬಡಮಕ್ಕಳು. ಹೀಗಾಗಿ ಈ ದೋಷವನ್ನು ಈಗಲಾದರೂ ಸರಿಪಡಿಸಲು ಪೂರ್ವಪ್ರಾಥಮಿಕ ಹಂತದ ಇಡೀ ಮಕ್ಕಳ ಈ ಶಿಕ್ಷಣದ ಜವಾಬ್ದಾರಿಯನ್ನು ಖಾಸಗಿಯವ
ರಿಂದ ಬಿಡಿಸಿ ಸರ್ಕಾರ ತಾನೇ ಸಂಪೂರ್ಣವಾಗಿ ವಹಿಸಿಕೊಂಡು ಕಡ್ಡಾಯ, ಉಚಿತ ಮತ್ತು ಸಮಾನ ಶಿಕ್ಷಣವು ಪ್ರತಿ ಮಗುವಿಗೂ ಈ ಹಂತದಲ್ಲಾದರೂ ಖಾತರಿಯಾಗುವಂತೆ ಮಾಡಬೇಕು. ಭಾಷಾ ಮಾಧ್ಯಮವೂ ಈ ಹಂತದಲ್ಲೇ ಎಲ್ಲ ಮಗುವಿಗೂ ಸಮಾನವಾಗಿರುವಂತಹ ವ್ಯವಸ್ಥೆಯನ್ನು ರೂಪಿಸಬೇಕು.